ಸಾಹಿತ್ಯ ಸಮ್ಮೇಳನ: ಧ್ವಜಾರೋಹಣ

0


ಅಮ್ಮುಂಜೆ : ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯುತ್ತಿರುವ ಎರಡು ದಿನಗಳ ಬಂಟ್ವಾಳ ತಾಲೂಕು 22 ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕರುಣಾಕರ ಆಳ್ವ ಅಮುಂಜೆಗುತ್ತು ರಾಷ್ಟ್ರಧ್ವಜಾರೋಹಣ ನಡರವೇರಿಸಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ ಎಂ ಪಿ. ಶ್ರೀನಾಥ್ ಪರಿಷತ್ತಿನ ಧ್ವಜಾರೋಹಣ ನೆರವೇರಿಸಿದರು. ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ವಿಶ್ವನಾಥ ಬಂಟ್ವಾಳ ಕನ್ನಡ ಧ್ವಜಾರೋಹಣ ಮಾಡಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಸುಗುಣಾ ಸಂಕಪ್ಪ ಶೆಟ್ಟಿ, ಶಿಕ್ಷ ಕ ಹರೀಶ್ ರಾವ್ , ತಾಲೂಕು ಕಸಾಪ ಮಾಜಿ ಅಧ್ಯಕ್ಷ ಜಯಾನಂದ ಪೆರಾಜೆ, ಪದಾಧಿಕಾರಿಗಳಾದ ವಿ ಸುಬ್ರಹ್ಮಣ್ಯ ಭಟ್, ರಮಾನಂದ ನೂಜಿಪ್ಪಾಡಿ, ಡಿ. ಬಿ ಅಬ್ದುಲ್ ರಹಮಾನ್, ಗಣೇಶ ಪ್ರಸಾದ ಪಾಂಡೇಲು, ಪಿ ಮಹಮ್ಮದ್, ಸ್ವಾಗತ ಸಮಿತಿಯ ಜನಾರ್ದನ ಅಮುಂಜೆ , ಅಬೂಬಕರ್ ಅಮುಂಜೆ ಮೊದಲಾದ ವರು ಉಪಸ್ಥಿತರಿದ್ದರು. ಸ್ಥಳೀಯ ಶಾಲೆ ಮಕ್ಕಳು ರಾಷ್ಟ್ರಗೀತೆ ಹಾಡಿದರು. ಮುದಸಿರ್ ಕಣಿಯೂರು ಮತ್ತು ಬಾಲಕೃಷ್ಣ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here