ರಾಮನಗರ: ಕುಣಿತ ಭಜನಾ ತರಬೇತಿ

0

ಬಂಟ್ವಾಳ : ನರಿಕೊಂಬು ಗ್ರಾಮದ ಕೋದಂಡರಾಮ ಭಜನಾ ಮಂಡಳಿ ಅಂತರ ರಾಮನಗರದಲ್ಲಿ ಅ.30ರಂದು ಸ್ಥಳೀಯ ಮಕ್ಕಳಿಗೆ ಕುಣಿತಭಜನಾ ತರಬೇತಿ ಕಾರ್ಯಕ್ರಮವನ್ನು ಪ್ರಗತಿಪರ ಕೃಷಿಕ ಪ್ರೇಮನಾಥ ಶೆಟ್ಟಿ ಅಂತರ ದೀಪ ಬೆಳಗಿಸಿ ಉದ್ಘಾಟಿಸಿದರು.
ಬೋಳಂತೂರು ಯೋಗಿಶ್ ಸಪಲ್ಯ ಇವರು ನೃತ್ಯ ಭಜನಾ ತರಬೇತಿಯನ್ನು ನೀಡಿದರು. ಸುಮಾರು 25 ಮಕ್ಕಳು ತರಬೇತಿಯಲ್ಲಿ ಭಾಗವಹಿಸಿದರು.
ಈ ಕಾರ್ಯಕ್ರಮವು ಕೃಷ್ಣಪ್ಪ ಗಾಣಿಗ ಅವರ ಸಹಭಾಗಿತ್ವದಲ್ಲಿನೆರವೇರಿತು.ಭಜನಾ ಮಂಡಳಿ ಅಧ್ಯಕ್ಷರಾದ ನಿತೇಶ್ ಕುಮಾರ್, ಕರುಣಾಕರ, ಗಣೇಶ್ ಬಿ. ಹಾಗೂ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here