ಮೂಡಬಿದ್ರೆ: ಭಾರತೀಯ ಜೈನ್ ಮಿಲನ್ ವಲಯ -8ರ ಸಮಾವೇಶ

0

ಮೂಡಬಿದ್ರೆ: ಭಾರತೀಯ ಜೈನ್ ಮಿಲನ್ ವಲಯ -8ರ ಸಮಾವೇಶವು ಮೂಡಬಿದ್ರೆಯ ಎಕ್ಸಲೆಂಟ್ ಕಾಲೇಜಿನಲ್ಲಿ ನಡೆಯಿತು, ಈ ಸಂದರ್ಭದಲ್ಲಿ ವಲಯ ಎಂಟರ ಜೈನ್ ಮಿಲನ್ ಗಳ ಕಾರ್ಯಸಾಧನೆಗಾಗಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಂಗಳೂರು ವಿಭಾಗದ ಬಂಟ್ವಾಳ ಜೈನ್ ಮಿಲನ್ ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನದ ಪ್ರಶಸ್ತಿಯನ್ನು ಪಡೆಯಿತು.

ಭಾರತೀಯ ಜೈನ್ ಮಿಲನ್ ನ ರಾಷ್ಟ್ರೀಯ ಕಾರ್ಯಾಧ್ಯಕ್ಷರಾದ ಸುರೇಂದ್ರಕುಮಾರ್ ಧರ್ಮಸ್ಥಳ ಇವರು ಪ್ರಶಸ್ತಿ ನೀಡಿ ಗೌರವಿಸಿದರು, ರಾಷ್ಟ್ರೀಯ ಮಿಲನ್ ಮಹಿಳಾ ಅಧ್ಯಕ್ಷ್ಯೆ ಅನಿತಾ ಸುರೇಂದ್ರಕುಮಾರ್, ವಲಯ 8ರ ಅಧ್ಯಕ್ಷ ಪುಷ್ಪರಾಜ್ ಜೈನ್, ಕಾರ್ಯದರ್ಶಿ ರಾಜೇಶ್. ಎಂ, ವಲಯ ಎಂಟರ ಉಪಾಧ್ಯಕ್ಷ ಸುದರ್ಶನ್ ಜೈನ್, ವಿಭಾಗ ಕಾರ್ಯದರ್ಶಿ ಸುಭಾಶ್ಚಂದ್ರ ಜೈನ್, ಮಿಲನ ಶ್ರೀ ಪ್ರಶಸ್ತಿ ಪಡೆದ ಯುವರಾಜ್ ಜೈನ್ ಉಪಸ್ಥಿತರಿದ್ದು, ಬಂಟ್ವಾಳ ಜೈನ್ ಮಿಲನ ನಿಕಟಪೂರ್ವ ಅಧ್ಯಕ್ಷ ಡಾ. ಸುದೀಪ್ ಸಿದ್ದಕಟ್ಟೆ, ಕಾರ್ಯದರ್ಶಿ ಸನ್ಮತಿ, ಪ್ರಸ್ತುತ ಕಾರ್ಯದರ್ಶಿ ಮಧುಶ್ರೀ ಹಾಗೂ ಹಾಗೂ ಬಂಟ್ವಾಳ ಮಿಲನ ಮತ್ತು ಅರ್ಕಕೀರ್ತಿ ಇಂದ್ರ, ವಿಜಯಕುಮಾರಿ ಇಂದ್ರ, ಆದಿರಾಜ ಜೈನ್, ಶ್ರೀಮoದರ್ ಜೈನ್, ಶಾಂತಿ ಪ್ರಸಾದ್,ಅಜಿತ್ ಕುಮಾರ್, ಸಂಧ್ಯಾ, ಅನುಪಮಾ ಜೈನ್, ಸೀಮಾ ಜೈನ್, ಕಾಂತಿ ಜೈನ್ ಹಾಗೂ ಬಂಟ್ವಾಳ ಜೈನ್ ಮಿಲನ್ ಪದಾಧಿಕಾರಿಗಳು ಸದಸ್ಯರುಗಳು ಪ್ರಶಸ್ತಿಯನ್ನು ಸ್ವೀಕರಿಸಿದರು.

LEAVE A REPLY

Please enter your comment!
Please enter your name here