ಸಜೀಪಮುನ್ನೂರು: ಜಿ. ಪಂ. ಮಾಜಿ ಸದಸ್ಯ ಎ. ಸಿ. ಭಂಡಾರಿ ಅವರಿಗೆ ಪತ್ನಿ ವಿಯೋಗ

0

ಬಂಟ್ವಾಳ :ಸಜೀಪಮುನ್ನೂರು ಗ್ರಾಮ ಅಂಬಡೆಬೈಲು ನಿವಾಸಿ, ಜಿ. ಪಂ. ಮಾಜಿ ಸದಸ್ಯ ಎ. ಸಿ. ಭಂಡಾರಿ ಅವರ ಪತ್ನಿ ರಾಜೀವಿ ಸಿ. ಶೆಟ್ಟಿ ( 75) ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಅ.8ರಂದು ಬೆಳಗ್ಗೆ ನಿಧನ ಹೊಂದಿದರು.
ಅವರಿಗೆ ಶುಕ್ರವಾರ ಲಘುವಾಗಿ ಜ್ವರ ಮತ್ತು ಕೆಮ್ಮು ಆರಂಭವಾಗಿದ್ದು ಅಪರಾಹ್ನ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಮೃತರ ಮನೆಗೆ ಭೇಟಿ ನೀಡಿದ ಮಾಜಿ ಸಚಿವ ಬಿ.ರಮಾನಾಥ ರೈ, ಜಿ.ಪಂ. ಮಾಜಿ ಸದಸರುಗಳಾದ ಚಂದ್ರಪ್ರಕಾಶ ಶೆಟ್ಟಿ, ಕೆ. ರಾಧಾಕೃಷ್ಣ ಆಳ್ವ, ತಾ.ಪಂ. ಮಾಜಿ ಅಧ್ಯಕ್ಷರುಗಳಾದ ಚಂದ್ರಹಾಸ ಕರ್ಕೇರ, ಕೆ.ಪದ್ಮನಾಭ ರೈ, ಸಾಮಾಜಿಕ ಗಣ್ಯರಾದ, ಫರಂಗಿಪೇಟೆ ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣ ಕುಮಾರ್ ಪೂಂಜ, ಪ್ರಹ್ಲಾದ ಶೆಟ್ಟಿ ಜಡ್ತಿಲ, ಉದ್ಯಮಿ ಜಗನ್ನಾಥ ಚೌಟ, ಪರಮೇಶ್ವರ ಎಂ., ಪ್ರಶಾಂತ ಕಾಜವ, ಸೀತಾರಾಮ ಶೆಟ್ಟಿ ಕಾಂತಾಡಿ, ಮನೋಜ್ ಆಳ್ವ, ಸಚ್ಚಿದಾನಂದ ಶೆಟ್ಟಿ ಬೊಂಡಾಲ ಮತ್ತು ಇತರರು ಸಂತಾಪ ಸೂಚಿಸಿದ್ದಾರೆ.
ಶನಿವಾರ ಅವರ ಮನೆ ವಠಾರದ ಜಮೀನಿನಲ್ಲಿ ಅಂತಿಮ ಕಾರ್ಯಕ್ರಮ ನಡೆಯಿತು.
ಮೃತರು ಪತಿ, ಮಂಗಳೂರು ವೈದ್ಯಾಧಿಕಾರಿ ಡಾ| ಸುಜಯ್ ಭಂಡಾರಿ ಸಹಿತ ಇಬ್ಬರು ಪುತ್ರರು, ಪುತ್ರಿ, ಮೊಮ್ಮಕ್ಕಳನ್ನು ಅಗಲಿದ್ದಾರೆ.


LEAVE A REPLY

Please enter your comment!
Please enter your name here