ಸೆ.26ರಿಂದ ಬಿ.ಸಿರೋಡು ಶ್ರೀ ರಕ್ತೇಶ್ವರಿ ದೇವೀ ಸನ್ನಿಧಿಯಲ್ಲಿ ಶರನ್ನವರಾತ್ರಿ ಮಹೋತ್ಸವ

0

ಬಂಟ್ವಾಳ : ಬಿ.ಸಿರೋಡು ಶ್ರೀ ರಕ್ತೇಶ್ವರಿ ದೇವೀ ಸನ್ನಿಧಿಯಲ್ಲಿ ಸೆ. 26ರಿಂದ ಅ. 5ರವರೆಗೆ ಶರನ್ನವರಾತ್ರಿ ಮಹೋತ್ಸವ ಜರಗಲಿದೆ.
ಕಾರ್ಯಕ್ರಮ ಸೆ. 30 ಮತ್ತು ಅ. 1ರಂದು ಪೂರ್ವಾಹ್ನ 11 ಗಂಟೆಗೆ ಹಗಲು ನಾಗಾರಾಧನೆ, ಅ. 3ರಂದು ದುರ್ಗಾಷ್ಠಮಿ, ಆ ಪ್ರಯುಕ್ತ ವಿಶೇಷ ದುರ್ಗಾಪೂಜೆ, ಪ್ರತಿ ಸಂಜೆ ಗಂಟೆ 6ರಿಂದ ಭಜನೆ ಹಾಗೂ ಸಾಂಸ್ಕೃತಿಕ ಕಾರ್ಯ್ರಮ ಮತ್ತು ರಾತ್ರಿ 8 ಗಂಟೆಗೆ ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ.

ಅ. 4ರಂದು ಆಯುಧ ಪೂಜೆ, ಅ. 5ರಂದು ವಿಜಯದಶಮಿ ಶುಭ ದಿನದಂದು ಪೂರ್ವಾಹ್ನ 8 ಗಂಟೆಗೆ ಬಹ್ಮಶ್ರೀ ವೇದಮೂರ್ತಿ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ಮಾರ್ಗದರ್ಶನದಂತೆ ವೇದಮೂರ್ತಿ ಶ್ರೀ ಮುಂಕುಂದ ಭಟ್ಟ ಇವರ ನೇತೃತ್ವದಲ್ಲಿ ಮಹಾ ಚಂಡಿಕಾಯಾಗವು ಜರಗಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here