ರೈಲು ಡಿಕ್ಕಿ; ಮಂಡಾಡಿಯ ಪ್ರವೀಣ್‌ ಪೂಜಾರಿ ಮೃತ್ಯು

0

ಬಂಟ್ವಾಳ : ರೈಲು ಡಿಕ್ಕಿಯಾಗಿ ವ್ಯಕ್ತಿಯೊರ್ವ ಮೃತಪಟ್ಟ ಘಟನೆ ಬಂಟ್ವಾಳ ನಗರ ಠಾಣೆಯ ಪುರಸಭಾವ್ಯಾಪ್ತಿಯ ಮೊಡಂಕಾಪು ಎಂಬಲ್ಲಿ ಸೆ.16ರಂದು ನಡೆದಿದೆ. ಮಂಡಾಡಿ ನಿವಾಸಿ ಪ್ರವೀಣ್ ಪೂಜಾರಿ (40) ಮೃತಪಟ್ಟ ವ್ಯಕ್ತಿ. ಪ್ರವೀಣ್ ಅವರು ರೈಲಿನ ಹಳಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.

ಪ್ರವೀಣ್ ತಲೆಗೆ ಬಲವಾಗಿ ರೈಲಿನ ಏಟು ಬಿದ್ದ ಪರಿಣಾಮ ರಕ್ತ ಸೋರಿಕೆಯಿಂದ ಮೃತ ಪಟ್ಟಿದ್ದಾರೆ. ಪ್ರವೀಣ್‌ ಅವರು ರೈಲು ಡಿಕ್ಕಿಯಾಗಿ ಪಕ್ಕದ ಪೊದೆಗೆ ಬಿದಿದ್ದರು ಎಂದು ತಿಳಿದು ಬಂದಿದೆ. ಸ್ಥಳೀಯರು ನೋಡಿ ಬಂಟ್ವಾಳ ನಗರ ಠಾಣಾ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಗರ ಠಾಣಾ ಎಸ್‌ಐ ಅವಿನಾಶ್ ಸ್ಥಳಕ್ಕೆ ಭೇಟಿ ನೀಡಿ ವ್ಯಕ್ತಿಯ ಗುರುತು ಪತ್ತೆ ಹಚ್ಚಿ ಬಳಿಕ ರೈಲ್ವೆ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಪ್ರವೀಣ್‌ ಅವರು ಮಾನಸಿಕವಾಗಿ ಅಸ್ವಸ್ಥರಾಗಿದ್ದರು ಎಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here