ಬ್ರಹ್ಮಶ್ರೀ ನಾರಾಯಣ ಗುರು ಧರ್ಮ ಪ್ರತಿಪಾಲನ ಸಂಘದ ತಾಲೂಕು ಅಧ್ಯಕ್ಷರಾಗಿ ಸಂತೋಷ್ ಕರ್ಕೇರ ಅಲ್ಲಿಪಾದೆ ಆಯ್ಕೆ

0

ಪುತ್ತೂರು: ಬ್ರಹ್ಮಶ್ರೀ ನಾರಾಯಣ ಗುರು ಧರ್ಮ ಪ್ರತಿಪಾಲನ ಸಂಘ( ರಿ) ಕರ್ನಾಟಕ ಇದರ ಬಂಟ್ವಾಳ ತಾಲೂಕು ಸಮಿತಿಯ ಅಧ್ಯಕ್ಷರಾಗಿ  ಸಂತೋಷ್ ಕರ್ಕೇರ ಅಲ್ಲಿಪಾದೆ ಅವರನ್ನು ಆಯ್ಕೆ ಆಗಿದ್ದಾರೆ.

ಬ್ರಹ್ಮಶ್ರೀ ನಾರಾಯಣ ಗುರು ಧರ್ಮ ಪ್ರತಿಪಾಲನ ಸಂಘದ ರಾಜ್ಯಾಧ್ಯಕ್ಷ ಸೈದಪ್ಪ ಗುತ್ತೇದಾರರ ಮಾರ್ಗದರ್ಶನದಲ್ಲಿ ಜಿಲ್ಲಾಧ್ಯಕ್ಷ ಬಿ ನವೀನ್ ಚಂದ್ರ ಪೂಜಾರಿಯವರ ನೇತೃತ್ವದಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು.

ಪ್ರಧಾನ ಸಂಚಾಲಕರಾಗಿ ನವೀನ್ ಕೋಟ್ಯಾನ್, ಪ್ರಧಾನ ಕಾರ್ಯದರ್ಶಿಯಾಗಿ ಪ್ರಶಾಂತ ನೆತ್ತರಕೆರೆ , ಗೌರವ ಸಲಹೆಗಾರರಾಗಿ ಸುಧಾಕರ್ ತುಂಬೆ, ಸುಂದರ್ ಮೆಲ್ಕಾರ್‌, ಪ್ರಶಾಂತ್ ಸುವರ್ಣ, ಪ್ರಕಾಶ್ ಕೋಡಿಮಜಲ್, ಉಪಾಧ್ಯಕ್ಷರಾಗಿ, ಬಿ ಧರ್ಮೇಂದ್ರ ಬಿ ಸಿ ರೋಡ್ , ಲೋಕೇಶ್ ಕಲ್ಲಡ್ಕ, ಕೇಶವ ಸುವರ್ಣ ಕಂದೂರ್, ಹರೀಶ್ ಮೆಲ್ಕಾರ್, ಕಾರ್ಯದರ್ಶಿಯಾಗಿ ಅಶೋಕ್ ಬಂಟ್ವಾಳ್, ಜೊತೆ ಕಾರ್ಯದರ್ಶಿಯಾಗಿ ಸತೀಶ್ ಕರ್ಕೇರ ಅಲ್ಲಿಪಾದೆ, ಸಂಘಟನಾ ಕಾರ್ಯದರ್ಶಿಗಳಾಗಿ ಸಂದೀಪ್ ಪೂಜಾರಿ ಸಿದ್ದಕಟ್ಟೆ, ರಾಕೇಶ್ ಕೋಡ್ಲೆ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಮನೋಜ್ ಕನಪಾಡಿ, ಕೋಶಾಧಿಕಾರಿಯಾಗಿ ಸಂದೀಪ್ ಬಂಗೇರ ಸಂಚಯಗಿರಿ ಆಯ್ಕೆಯಾಗಿದ್ದಾರೆ.20 ಜನರನ್ನು ಕಾರ್ಯಕಾರಣಿ ಸಮಿತಿಯಲ್ಲಿ ನೇಮಕ ಮಾಡಲಾಗಿದೆ. 

LEAVE A REPLY

Please enter your comment!
Please enter your name here