ಆತೂರು: ಎಸ್.ಕೆ.ಎಸ್.ಎಸ್.ಎಫ್. ಸದಸ್ಯತ್ವ ಅಭಿಯಾನಕ್ಕೆ ಚಾಲನೆ

0

ಉಪ್ಪಿನಂಗಡಿ: ಸಮಸ್ತ ಕೇರಳ ಜಂ-ಇಯ್ಯತ್ತುಲ್ ಉಲಮಾ ಒಕ್ಕೂಟದ ಪೋಷಕ ಸಂಘಟನೆಯಾದ ಎಸ್.ಕೆ.ಎಸ್.ಎಸ್.ಎಫ್. ಆತೂರು ಶಾಖೆ ಇದರ ಈ ವರ್ಷದ ಸದಸ್ಯತ್ವ ಅಭಿಯಾನ “ರಾಜಿಯಾಗದ ಸ್ವಾಭಿಮಾನ” ಧ್ಯೇಯದೊಂದಿಗೆ ಡಿ. ೫ರಂದು ಆತೂರು ಬದ್ರಿಯಾ ಜುಮಾ ಮಸೀದಿ ಸಭಾಂಗಣದಲ್ಲಿ ಚಾಲನೆ ನೀಡಲಾಯಿತು.

ಆತೂರು ಬದ್ರಿಯಾ ಜುಮಾ ಮಸೀದಿ ಮುದರ್ರಿಸ್ ಸಯ್ಯದ್ ಮುಹಮ್ಮದ್ ಜುನೈದ್ ಜಿಫ್ರಿ ತಂಙಳ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಸೀದಿ ಅಧ್ಯಕ್ಷ ಅಹ್ಮದ್ ಕುಂಞ ಉದ್ಘಾಟಿಸಿದರು. 
ಸಮಾರಂಭದಲ್ಲಿ ಮಸೀದಿ ಸಮಿತಿ ಕಾರ್‍ಯದರ್ಶಿ ಸಿರಾಜ್ ಬಡ್ಡಮೆ, ಆತೂರು ಎಸ್.ಕೆ.ಎಸ್.ಎಸ್.ಎಫ್. ಶಾಖೆ ಅಧ್ಯಕ್ಷ ಅಬ್ದುಲ್ ಖಾದರ್, ಆತೂರು ಕ್ಲಸ್ಟರ್ ಕಾರ್‍ಯದರ್ಶಿ ಝಕರಿಯಾ ಮುಸ್ಲಿಯಾರ್, ರೇಂಜ್ ಕಾರ್‍ಯದರ್ಶಿ ಸಿದ್ದಿಕ್ ಫೈಝಿ, ಅಜೀಝ್ ಹಲ್ಯಾರ, ಮುನೀರ್, ಝೈನ್ ಆತೂರು, ಅಝೀಝ್ ನೀರಾಜೆ, ಇಕ್ಬಾಲ್ ನೀರಾಜೆ ಹಾಗೂ ಮದ್ರಸಾ ಅಧ್ಯಾಪಕರು, ಎಸ್.ಕೆ.ಎಸ್.ಬಿ.ವಿ. ಪದಾಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು. ಕಾರ್‍ಯದರ್ಶಿ ಎನ್. ಸಿದ್ದಿಕ್ ಸ್ವಾಗತಿಸಿ, ವಂದಿಸಿದರು.

LEAVE A REPLY

Please enter your comment!
Please enter your name here