ಪೆರ್ನೆ: ಟೈಲರಿಂಗ್‌ ತರಬೇತಿ ಶಿಬಿರದ ಸಮಾರೋಪ

0

ಪೆರ್ನೆ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ವ್ಯಾಪ್ತಿಯ ಪೆರ್ನೆ ವಲಯದ ಜ್ಞಾನವಿಕಾಸ ಸದಸ್ಯರಿಗೆ ಆಯೋಜಿಸಿದ ಟೈಲರಿಂಗ್ ತರಬೇತಿ ಕಾರ್ಯಕ್ರಮದ ಸಮರೋಪ ಸಮಾರಂಭ ಪೆರ್ನೆ ಒಕ್ಕೂಟ ಅಧ್ಯಕ್ಷೆ ಯಶೋದ ಅಧ್ಯಕ್ಷತೆಯಲ್ಲಿ ಶ್ರೀರಾಮಚಂದ್ರ ಪದವಿಪೂರ್ವ ಕಾಲೇಜ್ ನಲ್ಲಿ ಜರಗಿತು .

ಜನಜಾಗೃತಿ ವೇದಿಕೆ ಪೆರ್ನೆ ವಲಯ ಅಧ್ಯಕ್ಷ ರೋಹಿತಾಕ್ಷ ಬನಬೆಟ್ಟು ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು.

ನವೀನ್ ಕುಮಾರ್ ಪದಬರಿ, ಗೋಪಾಲ ಸಫಲ್ಯ ಬೆದ್ರಾ,ರಮೇಶ್ ತೋಟ,ಚಂದ್ರಾವತಿ, ನಳಿನಿ, ಸರಸ್ವತಿ, ಜಯಶ್ರೀ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ತಾಲೂಕು ಯೋಜನಾಧಿಕಾರಿ ಚೆನ್ನಪ್ಪ ಗೌಡ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿದರು. ಈ ಸಂದರ್ಭದಲ್ಲಿ ಟೈಲರಿಂಗ್ ತರಬೇತಿ ನೀಡಿದ ಶಿಕ್ಷಕಿ ಸುಗುಣ ಇವರನ್ನು ಅಭಿನಂದಿಸಲಾಯಿತು.

LEAVE A REPLY

Please enter your comment!
Please enter your name here