ನಾಲ್ಕು ಎಕರೆ ಕಂಬಳ ಗದ್ದೆಯಲ್ಲಿ ನೇಜಿ ನಾಟಿ

0

ಬಂಟ್ವಾಳ : ಕಾವಳಪಡೂರು ಗ್ರಾಮದ ಶ್ರೀ ರಾಮ ನಗರ ಮದ್ವ ಶಿವಾಜಿ ಬಳಗ ಮತ್ತು ಶಿವಾಜಿ ಮಾತ್ರ ಸೇವಾ ಟ್ರಸ್ಟ್ ನ ಕಾರ್ಯಕರ್ತರು, ವಾಮದಪದವು ಸರಕಾರಿ ಪದವಿ ಪೂರ್ವ ಕಾಲೇಜು ಶಾಲಾ ಮಕ್ಕಳಿಂದ ಪೆರಿಯಾವು ಗುತ್ತು ಮನೆಯ ನಾಲ್ಕು ಎಕರೆ ಕಂಬಳ ಗದ್ದೆಯಲ್ಲಿ ನೇಜಿ ನೆಡುವ ಕಾರ್ಯಕ್ರಮ ಆ. 8ರಂದು ನಡೆಯಿತು.

ಆಧುನಿಕ ಯುಗದಲ್ಲಿ ಯಂತ್ರಗಳ ಬಳಕೆ ಹೆಚ್ಚಾಗಿ ಉಪಯೋಗಿಸುತ್ತಿದ್ದರೂ ಕೂಡ ಈ ಕಂಬಳ ಗದ್ದೆಯನ್ನು ಪುರಾತನ ಪರಂಪರೆಯ ಪ್ರಕಾರ ಜನರಿಂದಲೇ ನಾಟಿ ಮಾಡುವ ಪದ್ದತಿ ಇಂದಿಗೂ ಕೂಡ ಇದೆ. ಅದರಂತೆ ಈಗಿನ ಯುವ ಜನಾಂಗಕ್ಕೆ ಕೃಷಿಯ ಬಗ್ಗೆ ಒಲವನ್ನು ಹೆಚ್ಚಿಸಲು ಶಿವಾಜಿ ಬಳಗ ಹಾಗೂ ಶಿವಾಜಿ ಮಾತ್ರ ಸೇವಾ ಟ್ರಸ್ಟ್‌ನ ಯುವಕ ಹಾಗೂ ಯುವತಿಯರ ತಂಡವು ಕಳೆದ ಎರಡು ತಿಂಗಳಿನಿಂದ ರೈತರ ವಿವಿಧ ಹಡಿಲು ಭೂಮಿಯನ್ನು ನಾಟಿ ಮಾಡಲು ಪ್ರೋತ್ಸಾಹ ನೀಡಿದರು.

LEAVE A REPLY

Please enter your comment!
Please enter your name here