ಪೆರ್ನೆ ವಲಯದ ನೂತನ ಪಧಾಧಿಕಾರಿಗಳ ಪದಗ್ರಹಣ ; ಸಾಮೂಹಿಕ ಶ್ರೀ ಧನ್ವಂತರಿ ಕಾರ್ಯಕ್ರಮ

0

ಪೆರ್ನೆ: ಪೆರ್ನೆ ವಲಯದ ನೂತನ ಪಧಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಮತ್ತು ಸಾಮೂಹಿಕ ಶ್ರೀ ಧನ್ವಂತರಿ ಪೂಜಾ ಕಾರ್ಯಕ್ರಮ ಶ್ರೀರಾಮಚಂದ್ರ ಪದವಿಪೂರ್ವ ವಿದ್ಯಾಲಯ ಅಯೋಧ್ಯ ನಗರ ಪೆರ್ನೆ ಇಲ್ಲಿ ಆ.7ರಂದು ನಡೆಯಿತು. ಕಾರ್ಯಕ್ರಮವನ್ನುಉದ್ಘಾಟಿಸಿದ ಪುತ್ತೂರು ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್‌ ನ ಗೌರವಾಧ್ಯಕ್ಷ ಧನ್ಯಕುಮಾರ್‌ರೈ, ಬಿಳಿಯೂರು ಗುತ್ತು ಮಾತನಾಡಿ ಗ್ರಾಮಾಭಿವೃದ್ಧಿ ಯೋಜನೆಯೂ ಬಡವ, ಆರ್ಥಿಕ ಸಂಕಷ್ಟ ಉಳ್ಳವರಿಗೆ ಬಹಳ ಸಹಕಾರಿಯಾಗಿದೆ. ಮಾತ್ರವಲ್ಲ ಅನೇಕ ಸಮಸ್ಯೆ ಉಳ್ಳ ವ್ಯಕ್ತಿಗಳಿಗೆ ಪರಿಹಾರವಾಗಿ ಈ ಯೋಜನೆಯು ಫಲಕಾರಿಯಾಗಿ ಕೆಲಸ ಮಾಡುತ್ತಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪ್ರಗತಿಬಂಧು ಸ್ವಸಹಾಯ ಸಂಘ ಒಕ್ಕೂಟ ಪೆರ್ನೆ ವಲಯ ಅಧ್ಯಕ್ಷ ರಮೇಶ್‌ ತೋಟ ಮಾತನಾಡಿ ” ಹದಿನೆಂಟು ವರ್ಷಗಳಿಂದ ಈ ಯೋಜನೆಯೂ ಅನೇಕ ಕುಟುಂಬಗಳಿಗೆ ಸಹಕಾರಿಯಾಗಿದ್ದೂ ಮಾತ್ರವಲ್ಲದೆ ಇದರಲ್ಲಿರುವ ಅನೇಕ ನಾನಾ ಯೋಜನೆಗಳು ಬಡವರ, ಕೃಷಿಕರ ಬೆನ್ನೆಲುಬಾಗಿ ನಿಂತಿದೆ, ಪ್ರಗತಿಬಂಧು ಯೋಜನೆ ಕೃಷಿಕರಿಗೆ ಬಹಳಷ್ಟು ಪ್ರಯೋಜನ ನೀಡಿದೆ ಎಂದರು.

ಮುಖ್ಯಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಪುತ್ತೂರು ಶಾಸಕ ಸಂಜೀವ ಮಠಂದೂರು “ಖಾವಂದರ ಗ್ರಾಮಾಭಿವೃದ್ಧಿ ಯೋಜನೆಯೂ ಗ್ರಾಮೀಣ ಜನರಿಗೆ ಬಹಳಷ್ಟು ಉಪಯೋಗವಾಗುತ್ತಿದೆ, ಅನೇಕ ಮಕ್ಕಳು ಈ ಯೋಜನೆಯಿಂದಲೇ ವಿಧ್ಯಾಭ್ಯಾಸವನ್ನು ಪಡೆಯುತ್ತಿದ್ದಾರೆ ಎನ್ನುವುದರೊಂದಿಗೆ ಖಾವಂದರರಿಗೆ ಕೇಂದ್ರ ಸರಕಾರ ರಾಜ್ಯಸಭಾ ಸದಸ್ಯನನ್ನಾಗಿ ಮಾಡಿರುವುದು ನಮಗೆಲ್ಲ ಹೆಮ್ಮೆಯ ಸಂಗತಿ ಎಂದರು.

ಶ್ರೀ ಕ್ಷೇತ್ರಗ್ರಾಮಾಭಿವೃದ್ಧಿಯೋಜನೆ ಬಿ.ಸಿ ಟ್ರಸ್ಟ್ ದ.ಕ ಜಿಲ್ಲಾ ನಿರ್ದೇಶಕ ಪ್ರವೀಣ್‌ಕುಮಾರ್, ವೈಧ್ಯಕೀಯ ಅಧೀಕ್ಷಕ ಕಕ್ಕಿಂಜೆ ಅನನ್ಯ ಲಕ್ಷ್ಮೀ ಸಂದೀಪ್, ಪೆರ್ನೆ ಗ್ರಾಮ ಪಂಚಾಯತ್‌ ಅಧ್ಯಕ್ಷ ಸುನೀಲ್ ನೆಲ್ಸನ್ ಪಿಂಟೊ, ರಾಮಚಂದ್ರ ಪದವಿ ಪೂರ್ವ, ವಿದ್ಯಾಲಯ ಅಯೋಧ್ಯನಗರ ಪೆರ್ನೆಯ ಸಂಚಾಲಕ ಹರೀಶ್ ಭಂಡಾರಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಜನಜಾಗೃತಿ ವಲಯ ಅಧ್ಯಕ್ಷ ಪೆರ್ನೆಯ ರೋಹಿತಾಕ್ಷ ಬಾಣಬೆಟ್ಟು, ಪೆರ್ನೆ ಹಾಲು ಉತ್ಪಾದಕರ ಸಹಕಾರಿ ಸಂಘ ನಿಯಮಿತ ಅಧ್ಯಕ್ಷ ನವೀನ್‌ಕುಮಾರ್ ಪದಬರಿ, ಯೋಜನಾಧಿಕಾರಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ವಿಟ್ಲ ತಾಲೂಕಿನ ಚೆನ್ನಪ್ಪಗೌಡ, ಜನಜಾಗೃತಿ ವೇದಿಕೆ ಸದಸ್ಯ, ಬಂಟ್ವಾಳ ಪುಷ್ಪರಾಜ್ ಹೆಗ್ಡೆ ಸತ್ತಿಕ್ಕಲ್ಲು ಉಪಸ್ಥಿತರಿದ್ದರು.

ಕಾರ್ಯಕ್ರಮದ ನಡುವೆ ನಾಟಿ ವೈದ್ಯಕೀಯಕ್ಷೇತ್ರದಲ್ಲಿ ಸಾಧನೆಗೈದ ಕಡೇಶಿವಾಲಯ ಪಟ್ಲ ನಿವಾಸಿ ಅಣ್ಣು ಪೂಜಾರಿ ಪಟ್ಲ, ಮಧ್ಯವರ್ತಿ ಶಿಬಿರಕ್ಕೆ ಕಳೆದ 18 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಕೆದಿಲ ಗ್ರಾಮ ನಿವಾಸಿ ನಳಿನ್ ಹಾಗೂ ಕಡೇಶಿವಾಲಯ ನಿವಾಸಿ ಕುಸಲಪ್ಪಇವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮವನ್ನು ಪೆರ್ನೆಯ ಮೇಲ್ವಿಚಾರಕಿ ಜಯಶ್ರಿ ಸ್ವಾಗತಿಸಿ, ವಲಯಅಧ್ಯಕ್ಷ, ಪ್ರಗತಿಬಂಧು ಸ್ವಸಹಾಯ ಸಂಘ ಒಕ್ಕೂಟ ಪೆರ್ನೆ ವಲಯದ ರಮೇಶ್‌ತೋಟ ವಂದಿಸಿ,ತುಳು ಸಾಹಿತ್ಯಅಕಾಡಮಿಯ ವಿದ್ಯಾ ನಿರೂಪಿಸಿದರು.

LEAVE A REPLY

Please enter your comment!
Please enter your name here