ತಹಶೀಲ್ದಾರ್‌ ಪ್ರಯಾಣಿಸುತ್ತಿದ್ದ ಕಾರಿಗೆ ಲಾರಿ ಡಿಕ್ಕಿ

0

ಮಂಗಳೂರು: ತಹಶೀಲ್ದಾರ್‌ ಪ್ರಯಾಣಿಸುತ್ತಿದ್ದ ಜೀಪಿಗೆ ಲಾರಿ ಡಿಕ್ಕಿಯಾದ ಘಟನೆ ಮಂಗಳೂರಿನ ಕಿನ್ನಿಗೋಳಿಯ ಕಾರ್ನಾಡ್‌ ಜಂಕ್ಷನ್‌ ಬಳಿ ನಡೆದಿದೆ.
ಮಂಗಳೂರಿನ ಕಾರ್ನಾಡ್‌ ಬೈಪಾಸ್‌ ಮೂಲಕ ಕಾರ್ನಾಡ್‌ ನಲ್ಲಿರುವ ಮುಲ್ಕಿ ತಹಶೀಲ್ದಾರ್‌ ಕಚೇರಿಗೆ ಕರ್ತವ್ಯ ನಿರ್ವಹಿಸಲು ತಹಶೀಲ್ದಾರ್‌ ಗುರುಪ್ರಸಾದ್ ಸರಕಾರದ ವಾಹನದಲ್ಲಿ ಹೋಗುತ್ತಿದ್ದ ವೇಳೆ ಕಾರ್ನಾಡ್‌ ಜಂಕ್ಷನ್‌ ಬಳಿ ನಿಡ್ಡೋಡಿಯಿಂದ ಉಡುಪಿ ಕಡೆಗೆ ಕೆಂಪು ಕಲ್ಲು ಹೇರಿಕೊಂಡು ಸಾಗುತ್ತಿದ್ದ ಲಾರಿ ಡಿಕ್ಕಿ ಹೊಡೆದಿದೆ.

ಅಪಘಾತದ ರಭಸಕ್ಕೆ ಜೀಪ್‌ ಎದುರು ಭಾಗ ಜಖಂಗೊಂಡಿದೆ. ಅದೃಷ್ಟವಶಾತ್ ಜೀಪ್‌ ಎದುರು ಸೀಟಿನಲ್ಲಿ ಕುಳಿತಿದ್ದ ತಹಶೀಲ್ದಾರ್‌ ಗುರುಪ್ರಸಾದ್‌ ಅಪಾಯದಿಂದ ಪಾರಾಗಿದ್ದಾರೆ. ಅಪಘಾತದಿಂದ ಕೆಲ ಹೊತ್ತು ರಾಜ್ಯ ಹೆದ್ದಾರಿ ಸಂಚಾರ ಅಸ್ತವ್ಯಸ್ತಗೊಂಡಿದ್ದು ತಹಶೀಲ್ದಾರ್‌ ಬೇರೆ ವಾಹನದಲ್ಲಿ ಪ್ರಯಾಣಿಸಿದ್ದಾರೆ. ಬಳಿಕ ಸ್ಥಳೀಯ ಅಟೋ ಚಾಲಕರು ಮತ್ತಿತರರು ಸೇರಿ ಎರಡು ವಾಹನಗಳನ್ನು ಸ್ಥಳದಿಂದ ತೆರವುಗೊಳಿಸಿದ್ದಾರೆ.

LEAVE A REPLY

Please enter your comment!
Please enter your name here