ಕಡೇಶಿವಾಲಯ: ರೋಟರಿ ಸಮುದಾಯದ ದಳ ಕಡೇಶಿವಾಲಯ ಇದರ 2023-24 ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಜು.30ರಂದು ಪೆರ್ಲಾಪ್ ರೋಟರಿ ಭವನದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಕ್ಲಬ್ ಬಂಟ್ವಾಳ ಅಧ್ಯಕ್ಷ ರೊ|PHF ಪ್ರಕಾಶ್ ಬಾಳಿಗ ವಹಿಸಿದ್ದರು. ವೇದಿಕೆಯಲ್ಲಿ ರೋಟರಿ ಕ್ಲಬ್ ಬಂಟ್ವಾಳ ಇದರ ಕಾರ್ಯದರ್ಶಿ ರೊ| ಸದಾಶಿವ ಬಾಳಿಗ ,ಸಾಹಿತಿ ಮತ್ತು ಸಮಾಜ ಸೇವಕಿ ವಿಂಧ್ಯಾ ಎಸ್. ರೈ ,ರೋಟರಿ ಕ್ಲಬ್ ಬಂಟ್ವಾಳ ಇದರ ನಿಕಟ ಪೂರ್ವ ಅಧ್ಯಕ್ಷ ಪುಷ್ಪರಾಜ್ ಹೆಗ್ಡೆ ಸತ್ತಿಕಲ್ಲು, ದಳದ ನಿಕಟ ಪೂರ್ವ ಅಧ್ಯಕ್ಷ ಯೋಗೀಶ್ ನಾಯ್ಕ್ ಡಿ ದಾಳಿಂಬ ಮತ್ತು ದಳದ ಕಾರ್ಯದರ್ಶಿ ಜಹೀರ್ ಪ್ರತಾಪನಗರ ಉಪಸ್ಥಿತರಿದ್ದರು .

ರೋಟರಿ ಸಮುದಾಯ ದಳದ ಸಲಹಾ ಸಮಿತಿಯ ಚೇರ್ಮನ್ ಕೆ.ಕೆ.ಶೆಟ್ಟಿ ಕುರುಂಬ್ಲಾಜೆ ಸ್ವಾಗತಿಸಿ, ನೂತನ ಅಧ್ಯಕ್ಷ ಕಿಶೋರ್ ಕುಮಾರ್ ಬಿ. ವಂದಿಸಿ, ದಳದ ಸದಸ್ಯ ನವೀನ್ ನಾಯ್ಕ್ ಪಿಳಿಂಗಳ ಕಾರ್ಯಕ್ರಮ ನಿರೂಪಿಸಿದರು.