ಸಿಪಿಐ ಧುರೀಣ ಡಿ.ಹೆನ್ರಿಲೋಬೋ ರವರಿಗೆ ಸಾರ್ವಜನಿಕ ನುಡಿ ನಮನ

0

ಬಂಟ್ವಾಳ: ಭಾರತ ಕಮ್ಯುನಿಸ್ಟ್ ಪಕ್ಷದ ಹಿರಿಯ ಮುಖಂಡ ಮಾಜಿ ಪುರಸಭಾ ಸದಸ್ಯ ಡಿ.ಹೆನ್ರಿ ಲೋಬೊರವರ ಸಾರ್ವಜನಿಕ ನುಡಿ ನಮನ ಕಾರ್ಯಕ್ರಮವು ಜೂ.7ರಂದು ಬಂಟ್ವಾಳ ಕಾಮ್ರೇಡ್ ಶಾಂತಾ ರಾಮ್ ಪೈ ಸ್ಮಾರಕ ಭವನದಲ್ಲಿ ಜರಗಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಮ್ಟಾಡಿ ಪಂಚಾಯತ್ ಸದಸ್ಯ ಹಿರಿಯರಾದ ಕಾಮ್ರೇಡ್ ಬಾಬು ಭಂಡಾರಿ ವಹಿಸಿದ್ದರು.

ಸಿ.ಪಿ.ಐ ಜಿಲ್ಲಾ ಕಾರ್ಯದರ್ಶಿ ಬಿ. ಶೇಖರ್, ಎಐಟಿಯುಸಿ ಜಿಲ್ಲಾ ಕಾರ್ಯದರ್ಶಿ ವಿ.ಸೀತಾರಾಮ್ ಬೇರಿಂಜ,ಸಿ.ಪಿ.ಐ ತಾಲೂಕು ಕಾರ್ಯದರ್ಶಿ ಸುರೇಶ್ ಕುಮಾರ್, ಸಿ.ಪಿ.ಐ ತಾಲೂಕು ಸಹ ಕಾರ್ಯದರ್ಶಿ ಪ್ರೇಮನಾತ್ ಕೆ ,AIYF ತಾಲೂಕು ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ಭಂಡಾರಿ,ಸಿ.ಪಿ.ಐ ಹಿರಿಯ ನಾಯಕಿ ರತಿ ಎಸ್.ಭಂಡಾರಿ,ಬಂಟ್ವಾಳ ತಾಲೂಕು ಸಮಾನಮನಸ್ಕ ಸಂ ಘಟನೆಯ ಸಂಚಾಲಕ  ಹಿರಿಯ ರಾದ ಪ್ರಭಾಕರ ದೈವಗುಡ್ಡೆ, ಸಿಪಿಐ ನಾಯಕ ತಿಮ್ಮಪ್ಪ ಕಾವೂರು ಮುಂತಾದವರು ಮಾತನಾಡಿ ಸಂಗಾತಿ ಡಿ.ಹೆನ್ರಿ ಲೋಬೊ ರವರು ಕಳೆದ ಐದು ದಶಕಗಳಿಂದ ಜಿಲ್ಲೆಯ ರೈತ ಕಾರ್ಮಿಕ ಚಳುವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿ,ಬೀಡಿ ಕಾರ್ಮಿಕರನ್ನು ಸಂಘಟಿಸಿ ಅವರ ಕೇಳಿಕೆಗಳ ಈಡೇರಿಕೆಗಾಗಿ ಜೀವನದ ಕೊನೆವರೆಗೂ ಹೋರಾಟ ನಡೆಸಿದರು ಮತ್ತು ಸಿಪಿಐ ಜಿಲ್ಲಾ ಮುಖಂಡರಾಗಿ, ಎಐಟಿಯುಸಿ ಜಿಲ್ಲಾ ಮಂಡಳಿ ಸದಸ್ಯರಾಗಿ ಕಾರ್ಯನಿರ್ವಹಿಸಿರುತ್ತಾರೆ ಬಂಟ್ವಾಳ ತಾಲೂಕು ಬೀಡಿ ಲೇಬರ್ ಯೂನಿಯನ್ ಅಧ್ಯಕ್ಷ ರಾಗಿ, ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿರುತ್ತಾರೆ, ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ರೈತ ಸಂಘದ ಕಾರ್ಯಕರ್ತರ ಜೊತೆ ಭೂ ಸುಧಾರಣಾ ಕಾಯಿದೆಯ ಹೋರಾಟದಲ್ಲಿ ಅತ್ಯಂತ ಸಕ್ರಿಯವಾಗಿ ತೊಡಗಿಸಿಕೊಂಡು ಜೀವನವನ್ನೇ ಮುಡಿಪಾಗಿಟ್ಟು ರೈತ ಕಾರ್ಮಿಕರ ಕಣ್ಮಣಿಯಾಗಿ ಉಳಿಯುತ್ತಾರೆ ಎಂದರು.

ಕಾರ್ಯಕ್ರಮದಲ್ಲಿ NFIW ನಾಯಕಿಯರಾದ ಭಾರತಿ ಶಂಭೂರು,ಶಮಿತ,ಮಮತ,ಕೇಶವತಿ ಮುಂತಾದವರು ಮತ್ತು ಕಟ್ಟಡ ಕಾರ್ಮಿಕರ ಸಂಘದ ನಾಯಕ ಹರ್ಷಿತ್ .ಡಿ ಮುಂತಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here