ಬಂಟ್ವಾಳ -ದಿ. ದೊಂಬಯ್ಯ ಮೂಲ್ಯರಿಗೆ ನುಡಿನಮನ

0

ಬಂಟ್ವಾಳ: ದಿ.ಡೊಂಬಯ್ಯ ಮೂಲ್ಯರಿಗೆ ನುಡಿನಮನ ಮತ್ತು ಅನ್ನದಾನ ಕಾರ್ಯಕ್ರಮವು ಶ್ರೀ ಗುರು ಚೈತನ್ಯ ಸೇವಾಶ್ರಮ ಗುಂಡೂರಿ ವೇಣೂರುನಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಸುಕುಮಾರ್ ಬಂಟ್ವಾಳ, ಶೇಷಪ್ಪ ಮಾಸ್ತರ್,ವಿಠಲ ಪಲ್ಲಿಕಂಡ,ಕಿಶೋರ್ ಬಂಗೇರ,ಪುನೀತ್ ಕಾಮಾಜೆ,ಕಾರ್ತಿಕ್ ಮಯ್ಯರಬೈಲು,ಸಂತೋಷ್ ಭಂಡಾರಿಬೆಟ್ಟು,ಪ್ರದೀಪ್ ಪಲ್ಲಮಜಲು,ನಿಶಾಲ್ ಕುಲಾಲ್, ಸೌಮ್ಯ ಸುಕುಮಾರ್ ,ಪದ್ಮನಾಭ ನಾವೂರ ಹಾಗೂ ತುಂಬೆ ಕುಲಾಲ ಸೇವಾ ಸಂಘದ ಸ್ಥಾಪಕ ಅಧ್ಯಕ್ಷರಾದ ನೀಲಪ್ಪ ಸಾಲಿಯಾನ್,ದಿ.ಡೊಂಬಯ್ಯ ಮುಲ್ಯರ ಮನೆಯವರಾದ ಶಶಿಧರ್ ಸಾಲಿಯಾನ್, ಸುಜಿತ್ ಕುಮಾರ್ , ಶ್ರೀಮತಿ ಅಕ್ಷತಾ, ಶ್ರೀಮತಿ ಮನ್ವಿತಾ, ರತನ್, ಉಪಸ್ಥಿತರಿದ್ದರು. ಸೇವಾಶ್ರಮದ ಹೊನ್ನಯ ಕಾಟಿಪಲ್ಲ ದಿವಂಗತರ ಆತ್ಮ ಸದ್ಗತಿಗಾಗಿ ಶ್ರೀ ಗುರುರಾಯರಲ್ಲಿ ಪ್ರಾರ್ಥಿಸಿದರು.

ನಿತೀಶ್ ಕುಲಾಲ್ ಪಲ್ಲಿಕಂಡ ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭದಲ್ಲಿ ಯುವ ವೇದಿಕೆ ವತಿಯಿಂದ ಆಶ್ರಮವಾಸಿಗಳಿಗೆ ಅಕ್ಕಿ ಮತ್ತು ಶುಚಿತ್ವ ಸಾಮಗ್ರಿ ನೀಡಲಾಯಿತು.
ದಿವಂಗತರ ಮಕ್ಕಳಿಂದ ಆಶ್ರಮದ ಅಭಿವೃದ್ಧಿಗೆ 5000 ರೂಪಾಯಿ ಸಹಾಯಧನ ಹಸ್ತಾಂತರಿಸಲಾಯಿತು.

LEAVE A REPLY

Please enter your comment!
Please enter your name here