ಏರ್ಯ ಸಾಹಿತ್ಯ ಸಂಭ್ರಮ ಉದ್ಘಾಟನೆ

0

ಬಂಟ್ವಾಳ : ಏರ್ಯರು ಸಾಹಿತ್ಯ ಕಷಿಯನ್ನು ತನ್ನ ಬದುಕಿನ ಜೀವಧಾತುವಾಗಿ ಬಳಸಿಕೊಂಡಿದ್ದರು ಎಂದು ಹಂಪಿ ಕನ್ನಡ ವಿವಿ ವಿಶ್ರಾಂತ ಕುಲಪತಿ ಡಾ- ಬಿ.ಎ. ವಿವೇಕ ರೈ
ಹೇಳಿದರು.

ಅವರು ಎ.2ರಂದು ಏರ್ಯ ಆಳ್ವ ಫೌಂಡೇಷನ್ ಆಶ್ರಯದಲ್ಲಿ ಏರ್ಯಬೀಡಿನಲ್ಲಿ ನಡೆದ ಏರ್ಯ ಸಾಹಿತ್ಯ ಸಂಭ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಜನಪದ ಸಾಹಿತ್ಯ, ಸಂಘಟನೆ ಬಗ್ಗೆ ಸರ್ವಕ್ಷೇತ್ರದಲ್ಲೂ ತೊಡಗಿಸಿಕೊಂಡ ಸಾಹಿತಿ ಏರ್ಯರು ಮಾನವತವಾದದ ಸಾಕಾರ ರೂಪವಾಗಿದ್ದರು. ಮುಂದಿನ ಮೂರು ವರ್ಷಗಳಲ್ಲಿ ಅವರ ಜನ್ಮ ಶತಮಾನೋತ್ಸವ ಆಚರಿಸುವ ಸುಸಂದರ್ಭ ಬರಲಿದ್ದು ಆಗ ಏರ್ಯರ ಸಮಗ್ರ ಸಾಹಿತ್ಯ ಸಂಪುಟವನ್ನು ಹೊರತರುವ ಕೆಲಸವಾಗಬೇಕು ಎಂದರು.


ಏರ್ಯರ ಪತ್ನಿ ಆನಂದಿ ಆಳ್ವ ಅವರು ಡಾ ವಿವೇಕ ರೈ ಅವರನ್ನು ಗೌರವಿಸಿದರು.


ಡಾ- ಏರ್ಯ ಲಕ್ಷ್ಮೀನಾರಾಯಣ ಆಳ್ವ ಅವರ ಕೃತಿಗಳಲ್ಲಿ ಮುಖ್ಯವಾದವುಗಳನ್ನು ಮಥಿಸುವ ಮತ್ತು ಏರ್ಯರ ಕವನಗಳನ್ನು ಹಾಡುವ ಉದ್ದೇಶದ ಈ ಕಾರ್ಯಕ್ರಮದಲ್ಲಿ ಹಿರಿಯ
ಸಾಹಿತಿಗಳಾದ ಡಾ. ತಾಳ್ತಜೆ ವಸಂತ ಕುಮಾರ್ ಏರ್ಯರ ಸ್ನೇಹ ಸೇತು ಕೃತಿಯನ್ನು,, ಡಾ ನಾ. ದಾಮೋದರ ಶೆಟ್ಟಿ ರಾಮಾಶ್ವಮೇಧದ ರಸತರಂಗಗಳು ಕೃತಿಯನ್ನು,
ಪ್ರೊ ಪಿ.ಕಷ್ಣಮೂರ್ತಿ ಮುಳಿಯ ತಿಮ್ಮಪ್ಪಯ್ಯ ಹಾಗೂ ಪತ್ರಗಳು ಚಿತ್ರಿಸಿದ ಸೇಡಿಯಾಪು ಕೃತಿಯನ್ನು, ಡಾ ಯು. ಮಹೇಶ್ವರಿ ಮೊದಲ ಮಳೆ ಕೃತಿಯನ್ನು ವಿಶ್ಲೇಷಿಸಿದರು.

ಅಪರಾಹ್ನದ ಕಾರ್ಯಕ್ರಮದಲ್ಲಿ ಡಾ- ತುಕಾರಾಮ್ ಪೂಜಾರಿ ಏರ್ಯರ ಕೃತಿ ಹಿಂದಣ ಹೆಜ್ಜೆ, ಡಾ ಸತ್ಯನಾರಾಯಣ ಮಲ್ಲಿಪಟ್ಟಣ ಸಂಚಯ ಕೃತಿಯನ್ನು, ಡಾ ಆರ್. ನರಸಿಂಹ ಮೂರ್ತಿ ನೂರರ ನೆನಪು ಕೃತಿಯನ್ನು, ಡಾ ಅರುಣಕುಮಾರ್ ಎಸ್.ಆರ್. ಅವರು ಮಂಗಳ ತಿಮಲು ಕೃತಿಯನ್ನು ವಿಶ್ಲೇಷಣೆ ಮಾಡಿದರು.

ಕಿಶೋರ್‌ ಪೆರ್ಲ ಅವರು ಗಾಯನ ನಡೆಸಿಕೊಟ್ಟರು. ಏರ್ಯರ ಪುತ್ರಿ ಸುಖಧಾ ಬಾಲಕಷ್ಣ ಹೆಗ್ಡೆ, ಮೊಮ್ಮಗಳು ಭಕ್ತಿ ಹೆಗ್ಡೆ ಮೊದಲಾದವರು ಉಪಸ್ಥಿತರಿದ್ದರು. ಏರ್ಯರ ಅಳಿಯ ಬಾಲಕಷ್ಣ ಹೆಗ್ಡೆ ಸ್ವಾಗತಿಸಿದರು. ನಿವತ್ತ ಪ್ರಾಧ್ಯಾಪಕ ಮಹಾಬಲೇಶ್ವರ ಹೆಬ್ಬಾರ್ ಹಾಗೂ ಉಪನ್ಯಾಸಕ ಕೇಶವ ಎಚ್. ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.

LEAVE A REPLY

Please enter your comment!
Please enter your name here