ಮಂಚಿ: ಕನಕಗಿರಿಯಲ್ಲಿ ಅಖಂಡ ಭಜನಾ ಸಪ್ತಾಹ- ಪೂರ್ವಬಾವಿ ಸಭೆ

0

ಬಂಟ್ವಾಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಹಯೋಗದೊಂದಿಗೆ ಮಂಚಿ ಕನಕಗಿರಿ ಶ್ರೀ ಗೋಪಾಲಕೃಷ್ಣ ಭಜನಾ ಮಂದಿರದಲ್ಲಿ ಎ.30 ಸೂರ್ಯಾಸ್ತದಿಂದ ಮೇ 7ರ ವರೆಗೆ ಅಖಂಡ ಭಜನಾ ಸಪ್ತಾಹ ನಡೆಸಲು ಮಂದಿರದಲ್ಲಿ ನಡೆದ ಪೂರ್ವಬಾವಿ ಸಭೆಯಲ್ಲಿ ನಿರ್ಣಯಿಸಲಾಯಿತು.

ವಿಟ್ಲ ವಲಯ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಜಿನ್ನಪ್ಪ ಗೌಡ, ಮೇಲ್ವಿಚಾರಕಿ ಸರಿತಾ, ಯೋಜನೆಯ ಪ್ರಮುಖರಾದ ದಿವಾಕರ ನಾಯಕ್, ಗೋಪಾಲಕೃಷ್ಣ ಸೇವಾ ವಿಶ್ವಸ್ಥ ಮಂಡಳಿ, ಕನಕಗಿರಿಯ ಸಂಚಾಲಕ ಕೈಯ್ಯೂರು ನಾರಾಯಣ ಭಟ್‌. ಅಧ್ಯಕ್ಷ ಸೀತಾರಾಂ ಶೆಟ್ಟಿ .ಸಿ.ಹೆಚ್, ವೆಂಕಪ್ಪ ಶೆಟ್ಟಿ.ಸಿ.ಹೆಚ್, ಹರ್ಷಿತ್ ಶೆಟ್ಟಿ.ಸಿ.ಹೆಚ್, ಕನಕಗಿರಿ ಗೋಶಾಲೆಯ ಟ್ರಸ್ಟಿಗಳಾದ ನ್ಯಾಯವಾದಿಗಳಾದ ರವೀಂದ್ರ ಕುಕ್ಕಾಜೆ, ಚಿದಾನಂದ ರಾವ್ ಪತ್ತುಮುಡಿ, ಮತ್ತು ಜಯರಾಂ ಶೇಖ ಪೀಲ್ಯಡ್ಕ, ಶೇಖರ.ಡಿ, ಗಣೇಶ್ ಆಚಾರ್ಯ, ಜಯಂತಿ, ಶ್ರೀದೇವಿ ಕೈಯ್ಯೂರು, ಶಶಿಕಲಾ, ವಿಶ್ವನಾಥ್ ಬಂಗೇರ,ಭಜನಾ ಸಂಚಾಲಕ ಭವಾನಿ ಶಂಕರ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here