ಪೂಂಜಾಲಕಟ್ಟೆಯಲ್ಲಿ ನಿರ್ಮಾಣಗೊಂಡ ಬಸ್ಸು ತಂಗುದಾಣ ಉದ್ಘಾಟನೆ

0

ಬಂಟ್ವಾಳ : ವಿಶ್ವಹಿಂದೂಪರಿಷದ್ ಭಜರಂಗದಳ ಶ್ರೀ ರಾಮ ಶಾಖೆ ರಾಮನಗರ ಘಟಕದ ವತಿಯಿಂದ ಪೂಂಜಾಲ ಕಟ್ಟೆ ಯಲ್ಲಿ ನಿರ್ಮಾಣಗೊಂಡ ಸುಸಜ್ಜಿತ ಬಸ್ಸು ತಂಗುದಾಣವನ್ನು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ,ಭಜರಂಗದಳ ಪುತ್ತೂರು ಜಿಲ್ಲಾ ಸಹ ಸಂಚಾಲಕ ಗುರುರಾಜ್ ಬಂಟ್ವಾಳ, ಪ್ರಸಾದ್ ಕುಮಾರ್ ರೈ ,ಪ್ರಸಾದ್ ಶಿವಾಜಿನಗರ ,ಬೆಂಜನಪದವು ತುಂಗಪ್ಪ ಬಂಗೇರ ,ಸಂದೇಶ್ ಕಾಡಬೆಟ್ಟು ,ಅಶ್ವಥ್ ಪೂಂಜಾಲಕಟ್ಟೆ ಹಾಗೂ ಹಲವು ಗಣ್ಯತಿಗಣ್ಯರ ಸಮ್ಮುಖದಲ್ಲಿ ಉದ್ಘಾಟನೆ ಮಾಡಲಾಯಿತು.


ವಿಶ್ವ ಹಿಂದೂಪರಿಷದ್ ಭಜರಂಗದಳ ಕಾರ್ಯಕರ್ತರು ಊರಿನ ಕೊಡುಗೈ ದಾನಿಗಳ ಸಹಕಾರದೊಂದಿಗೆ ಬಸ್ಸು ತಂಗುದಾಣ ನಿರ್ಮಿಸಲಾಗಿದೆ. ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಗುತ್ತು ಇವರು ಮಾತಾನಾಡಿ ಭಜರಂಗದಳ ಕಾರ್ಯಕರ್ತರು ದೇಶ ಕಾಯುವ ಯೋಧರಿದ್ದಂತೆ ದೇಶ ಧರ್ಮದ ರಕ್ಷಣೆಗೆ ಭಜರಂಗದಳ ಯಾವತ್ತೂ ಸದಾ ಸಿದ್ದ ಎಂದರು. ಬಂಟ್ವಾಳ ಪ್ರಖಂಡದ ಸಹಸಂಚಾಲಕ ಸಂತೋಷ್ ಕುಲಾಲ್ ಸರಪಾಡಿ ಕಾರ್ಯಕ್ರಮ ನಿರೂಪಿಸಿದರು.

ಭಜರಂಗದಳ ಶ್ರೀ ರಾಮ ಶಾಖೆ ರಾಮನಗರ ಪೂಂಜಾಲಕಟ್ಟೆ ಘಟಕದ ಸದಸ್ಯರು ಕಾರ್ಯಕರ್ತರು ಊರಿನ ಜನರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here