ಅಲ್ಲಿಪಾದೆ ಸಂತ ಅಂತೋನಿಯವರ ದೇವಾಲಯಕ್ಕೆ ಮಾಜಿ ಸಚಿವ ಬಿ.ರಮಾನಾಥ ರೈ ಭೇಟಿ

0

ಬಂಟ್ವಾಳ: ತಾಲೂಕಿನ ಸರಪಾಡಿ ಗ್ರಾಮದ ಅಲ್ಲಿಪಾದೆಯ ಪವಾಡ ಪುರುಷ ಸಂತ ಅಂತೋನಿಯವರ ದೇವಾಲಯಕ್ಕೆ ಮಾಜಿ ಸಚಿವ, ಬಂಟ್ವಾಳ ಕಂಬಳ ಸಮಿತಿ ಗೌರವಾಧ್ಯಕ್ಷ ಬಿ. ರಮಾನಾಥ ರೈ ಯವರು ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಚರ್ಚಿನ ಧರ್ಮಗುರು ರೆ.ಫಾ.ಫೆಡ್ರಿಕ್ ಮೊಂತೆರೋ ಅವರು ವಿಶೇಷ ಪ್ರಾರ್ಥನೆ ಸಲ್ಲಿಸಿ, ಅನುಗ್ರಹ ಸಂದೇಶ ನೀಡಿದರು. ಬಳಿಕ ಸಂತ ಅಂತೋನಿಯರ ಪ್ರತಿಮೆಯ ಮುಂದೆ ಬಿ.ರಮಾನಾಥ ರೈಯವರು ಕಂಬಳ ಸಮಿತಿಯ ಸದಸ್ಯರ ಜೊತೆಗೆ ಮೇಣದ ಬತ್ತಿಯನ್ನು ಉರಿಸಿ ತಮ್ಮ ಹರಕೆಯನ್ನು ಸಲ್ಲಿಸಿದರು.

ಚರ್ಚ್ ನ ಧರ್ಮಗುರುಗಳಾದ ರೆ.ಫಾ.ಫೆಡ್ರಿಕ್ ಮೊಂತೆರೋ, ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷ ನವೀನ್ ಮೋರಸ್, ಕಾರ್ಯದರ್ಶಿ ಕಿರಣ್ ನೊರೊನ್ಹಾ, ಕಂಬಳ ಸಮಿತಿ ಅಧ್ಯಕ್ಷ ಪಿಯೂಸ್ ರೊಡ್ರಿಗಸ್, ಕಂಬಳ ಸಮಿತಿ ಪ್ರಮುಖರಾದ ಪದ್ಮಶೇಖರ್ ಜೈನ್, ಬೇಬಿ ಕುಂದರ್, ಲಿಯೋ ಫೆರ್ನಾಂಡಿಸ್, ಲವೀನಾ ವಿಲ್ಮಾ ಮೋರಸ್, ಅಲ್ಬರ್ಟ್ ಪಾಯಿಸ್, ಬಾಲಕೃಷ್ಣ, ದೇವಪ್ಪ ಕರ್ಪೆ, ವಿನ್ಸೆಂಟ್, ಡೆನ್ಜಿಲ್ ನೊರೊನ್ಹಾ, ವಿಲ್ಸನ್, ಮೆಲ್ವಿನ್, ವಿಜೀತ್ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here