ಫೆ. 12: ಕರ್ನಾಟಕ ಸ್ಟೇಟ್ ಟೈಲರ್ಸ್ ಎಸೋಸಿಯೇಶನ್ ವಾರ್ಷಿಕ ಮಹಾಸಭೆ

0

ಬಂಟ್ವಾಳ : ಕಲ್ಲಡ್ಕ ಮಾಣಿ ವಲಯ ಸಮಿತಿಯ ಕರ್ನಾಟಕ ಸ್ಟೇಟ್ ಟೈಲರ್ಸ್ ಎಸೋಸಿಯೇಶನ್ ವಾರ್ಷಿಕ ಮಹಾಸಭೆಯು ಫೆ.12ರಂದು ಬೆಳಗ್ಗೆ 10 ಗಂಟೆಗೆ ಕಲ್ಲಡ್ಕ ನೇತಾಜಿ ಸ್ಮತಿ ಭವನದಲ್ಲಿ ಜರಗಲಿದೆ.
ಕಾರ್ಯಕ್ರಮದಲ್ಲಿ ಹಿರಿಯ ಟೈಲರ್ ವೃತ್ತಿ ಬಾಂಧವರಾದ ನಾರಾಯಣ ಟೈಲರ್ ಬೋಳಂತೂರು, ಆನಂದ ಪೂಜಾರಿ ಸೂರಿಕುಮೇರು, ಡೊಂಬಯ್ಯ ಟೈಲರ್ ಕಲ್ಲಡ್ಕ, ದೇವಕಿ ಅಮ್ಟೂರು, ಭಾಗ್ಯ ನಾಯಕ್ ನೇರಳಕಟ್ಟೆ ಮತ್ತು ಕಲ್ಲಡ್ಕ ವಲಯದ ಸಕ್ರೀಯ ಸದಸ್ಯೆ, ಬಂಟ್ವಾಳ ಕ್ಷೇತ್ರ ಸಮಿತಿಯ ನಿಕಟಪೂರ್ವ ಉಪಾಧ್ಯಕ್ಷೆ ಸರಸ್ವತಿ ಭಟ್ ಅವರ ಪುತ್ರ ಡೆಕ್ಕನ್ ಹೆರಾಲ್ಡ್ ಪತ್ರಿಕೆಯ ಪ್ರಶಸ್ತಿ ಪುರಸ್ಕೃತ ಶ್ರೀನಿಧಿ ಭಟ್ ಕೊಳಕೀರು ಕಲ್ಲಡ್ಕ ಅವರನ್ನು ಸನ್ಮಾನಿಸಲಾಗುವುದು ಎಂದು ಕಲ್ಲಡ್ಕ ಮಾಣಿ ವಲಯದ ಅಧ್ಯಕ್ಷ ವಸಂತ ಪೂಜಾರಿ ನಿಟಿಲಾಪುರ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here