ಕಲ್ಲಡ್ಕ :ಗ್ರಾಹಕರೊಂದಿಗೆ ಒಂದು ದಿನ ಕಾರ್ಯಕ್ರಮ

0

ಬಂಟ್ವಾಳ : ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘ ಬೆಳ್ತಂಗಡಿ ಇದರ 3 ನೇ ಕಲ್ಲಡ್ಕ ಶಾಖೆಯು 9 ವರ್ಷಗಳನ್ನು ಪೂರೈಸಿ 10 ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಸಂದರ್ಭರಲ್ಲಿ ಸಂಘದ ಬೆಳವಣಿಗೆಗೆ ಕಾರಣರಾದ ಗ್ರಾಹಕರೊಂದಿಗೆ ಮುಕ್ತವಾಗಿ ಬೆರೆಯಲು ” ಗ್ರಾಹಕರೊಂದಿಗೆ ಒಂದು ದಿನ ” ಕಾರ್ಯಕ್ರಮ ಕಲ್ಲಡ್ಕ ಶಾಖಾ ಕಚೇರಿಯಲ್ಲಿ ನಡೆಯಿತು.


ಸಂಘದ ಅಧ್ಯಕ್ಷ ಬಪದ್ಮನಾಭ ಮಣಿಂಜ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಗ್ರಾಹಕರೇ ಬ್ಯಾಂಕಿನ ಆಸ್ತಿಯಾಗಿದ್ದಾರೆ. ಉತ್ತಮ ರೀತಿಯ ಸೇವೆ ನೀಡುವುದರಲ್ಲಿ ಶ್ರೀ ಗುರುದೇವ ಬ್ಯಾಂಕ್ ಬದ್ಧವಾಗಿದೆ ಹಾಗೂ ಗ್ರಾಹಕರ ಬೇಡಿಕೆಗೆ ತಕ್ಕಂತೆ ಯಾವುದೇ ತಡ ಮಾಡದೆ ಕ್ಷಿಪ್ರಾವಾಗಿ ಸಾಲ ವಿತರಣೆ ಮಾಡಲಾಗುವುದು ಎಂದರು.

ವೇದಿಕೆಯಲ್ಲಿ ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಅಶ್ವತ್ ಕುಮಾರ್, ಬ್ಯಾಂಕಿನ ಸ್ಪೆಷಲ್ ಆಫೀಸರ್ ಮೋನಪ್ಪ ಪೂಜಾರಿ ಕಂಡೆತ್ಯಾರು, ನ ಗ್ರಾಹಕ ನಾರಾಯಣ ಪಿ ಕೋಟ್ಯಾನ್, ಆನಂದ ಸಪಲ್ಯ ಉಪಸ್ಥಿತರಿದ್ದರು.
ಕಲ್ಲಡ್ಕ ಶಾಖ ವ್ಯವಸ್ಥಾಪಕ ಶ ಮನೋಹರ್ ಸ್ವಾಗತಿಸಿ, ಮೋನಪ್ಪ ಪೂಜಾರಿ ಪ್ರಸ್ತಾವಿಕ ಮಾತನಾಡಿ, ಬಬಿತಾ ವಂದಿಸಿದರು
.

LEAVE A REPLY

Please enter your comment!
Please enter your name here