ಅಂಗನವಾಡಿಗಳಿಗೆ ಕಳಪೆ ಗುಣಮಟ್ಟದ ಅಕ್ಕಿ ಪೂರೈಕೆ – ಮಾಜಿ ಸಚಿವ ರಮಾನಾಥ ರೈ

0

ಬಂಟ್ವಾಳ ನ. 9: ಬಂಟ್ವಾಳ ತಾಲೂಕಿನಲ್ಲಿ ಅಂಗನವಾಡಿಗಳಿಗೆ ಕಳಪೆ ಗುಣಮಟ್ಟದ ಅಕ್ಕಿಪೂರೈಕೆ ಆಗುತ್ತಿದೆ ಆದರೆ ಆಡಳಿತ ಪಕ್ಷವು ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳಲಿರುವುದು ವಿಪರ್ಯಾಸ ಎಂದು ಮಾಜಿ ಸಚಿವ ರಮಾನಾಥ ರೈ ಗಂಭೀರವಾಗಿ ಆರೋಪ ಮಾಡಿದ್ದಾರೆ.

ಅಂಗನವಾಡಿಯಲ್ಲಿ ಬಾಣಂತಿಯರಿಗೆ, ಪುಟ್ಟ ಮಕ್ಕಳಿಗೆ ಪೌಷ್ಠಿಕ ಆಹಾರವನ್ನು ನೀಡುವ ಕಾರ್ಯಕ್ರಮವು ನಡೆಯುತ್ತಿದ್ದು ಅಕ್ಕಿಯಲ್ಲಿ ಹುಳಗಳು ರಾಶಿ ರಾಶಿಯಾಗಿ ಕಂಡುಬಂದು ಇದನ್ನು ಆರೋಗ್ಯ ತಪಾಸಣಾ ಅಧಿಕಾರಿಗಳಿಗೆ ತೋರಿಸಿದಾಗ ಅಂಗನವಾಡಿಯಲ್ಲಿ ಇಂತಹ ಅಕ್ಕಿ ಪೂರೈಕೆಯಾಗುವುದಿಲ್ಲ ಎಂದು ಉತ್ತರ ನೀಡಿದರು. ಆದರೆ ಸ್ವತ: ನಾನು ಐದಾರು ಅಂಗನವಾಡಿಗಳಿಗೆ ಭೇಟಿ ನೀಡಿ ಅಂಗನವಾಡಿಯ ಅಕ್ಕಿಯನ್ನು ಪರಿಶೀಲಿಸಿದಾಗ ಕಳಪೆ ಗುಣಮಟ್ಟದ ಅಕ್ಕಿಯು ಕಂಡುಬಂತು ಇನ್ನು ಮುಂದೆಯಾದರೂ ಅಂಗನವಾಡಿಗಳಿಗೆ ಗುಣಮಟ್ಟದ ಅಕ್ಕಿಯನ್ನು ನೀಡುವಂತೆ ನಾನು ಅಗ್ರಹಿಸುತ್ತೇನೆ ಎಂದು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.

LEAVE A REPLY

Please enter your comment!
Please enter your name here