ನಿಧನ : ರಾಮಕೃಷ್ಣ ಪುತ್ತೂರಾಯ

0

ಬಂಟ್ವಾಳ : ಬಿ.ಮೂಡ ಗ್ರಾಮ ಕೊಡಂಗೆ ನಿವಾಸಿ, ಬಂಟ್ವಾಳ ಪ್ರಧಾನ ನ್ಯಾಯಾಲಯ ಕಿರಿಯ ವಿಭಾಗದ ನಿವೃತ್ತ ಬೆಂಚ್ ಕ್ಲರ್ಕ್ ರಾಮಕೃಷ್ಣ ಪುತ್ತೂರಾಯ (75) ಅವರು ಅ. 26ರಂದು ಮೈಸೂರಿನ ತನ್ನ ಪುತ್ರನ ಸ್ವಗೃಹದಲ್ಲಿ ನಿಧನ ಹೊಂದಿದರು. ಮೃತರು ಪತ್ನಿ, ಇಬ್ಬರು ಪುತ್ರ, ಪುತ್ರಿಯನ್ನು ಅಗಲಿದ್ದಾರೆ.


ಅವರು ಬಂಟ್ವಾಳ ನ್ಯಾಯಾಲಯದಲ್ಲಿ ಸೇವೆಗೆ ಸೇರ್ಪಡೆಗೊಂಡು ಬಳಿಕ ಪುತ್ತೂರು, ಮಂಗಳೂರು ವಿವಿಧ ನ್ಯಾಯಾಲಯಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದರು.
ಅವರು ಬಂಟ್ವಾಳ ತಾಲೂಕು ಉದ್ಯೋಗಸ್ಥ ರ ಸಹಕಾರಿ ಸಂಘದ ಅಧ್ಯಕ್ಷರಾಗಿ, ಪಿಂಚಣಿದಾರರ ಸಂಘದ ನಿರ್ದೇಶಕರಾಗಿ, ಬಂಟ್ವಾಳ ನೌಕರರ ಸಂಘದ ಸ್ಥಾಪಕ ಕೋಶಾಧಿಕಾರಿಯಾಗಿ, ಬಂಟ್ವಾಳ ತಾಲೂಕು ಶಿವಳ್ಳಿ ಸಂಗಮದ ಸ್ಥಾಪಕ ಕಾರ್ಯದರ್ಶಿಯಾಗಿ ವಿವಿಧ ಸಾಮಾಜಿಕ ಸಂಘಟನೆಗಳಲ್ಲಿ ಸೇವೆ ಸಲ್ಲಿಸಿದ್ದರು. ಮೂಲತ: ಬೆಳ್ತಂಗಡಿ ತಾಲೂಕು ಬಳ್ಳಮಂಜ ನಿವಾಸಿಯಾಗಿದ್ದು ಶಿಕ್ಷಣದ ಬಳಿಕ ಬಂಟ್ವಾಳ ನ್ಯಾಯಾಲಯದಲ್ಲಿ ಸೇವೆಗೆ ಸೇರ್ಪಡೆಯಾಗಿದ್ದರು.

LEAVE A REPLY

Please enter your comment!
Please enter your name here