ಬಂಟ್ವಾಳ: ಧರ್ಮ ಮೃತ್ಯುಂಜಯ ತಂಡದಿಂದ ಹಣ ಹಸ್ತಾಂತರ

0

ಬಂಟ್ವಾಳ ತಾಲೂಕು ಮಣಿನಾಲ್ಕೂರು ಗ್ರಾಮದ ಕಡಮಾಜೆ ನಿವಾಸಿ ಪ್ರಮೀಳ ಎಂಬವರು ಸುಮಾರು ವರ್ಷಗಳಿಂದ ಖಿನ್ನತೆಯಿಂದ ಬಳಲುತ್ತಿದ್ದು ಮಾತ್ರವಲ್ಲದೆ ದೇಹದ ಬಲದ ಭಾಗ ಬಲಹೀನವಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.

ತೀರ ಬಡತನದಲ್ಲಿದ್ದ ಈ ಬಡ ಕುಟುಂಬಕ್ಕೆ ಹಣ ಸಂಗ್ರಹಕೋಸ್ಕರ ಬಂಟ್ವಾಳ ದಸರಾದಲ್ಲಿ ಧರ್ಮ ಮ್ರತ್ಯುಂಜಯ ತಂಡದಿಂದ ಭವತಿ ಬಿಕ್ಷಂದೇಹಿ ಅಭಿಯಾನವನ್ನು ಅ.6ರಂದು ನಡೆಸಿ ಅದರಲ್ಲಿ ಸಂಗ್ರಹವಾದ ಒಟ್ಟು ಮೊತ್ತ 15,340 ರೂ ಗಳನ್ನು ಪ್ರಮೀಳ ಕುಟುಂಬಕ್ಕೆ ಅ.9ರಂದು ಭಜರಂಗದಳ ಬಂಟ್ಟಾಳ ಪ್ರಖ೦ಡ ಸಹಸಂಚಾಲಕ ಸಂತೋಷ ಸರಪಾಡಿ ಹಾಗೂ ಬಂಟ್ಟಾಳ ಪ್ರಖಂಡ ಸೇವಾ ಪ್ರಮುಖ ಪ್ರಸಾದ್ ಬೆಂಜನಪದವು ಹಾಗೂ ಸರಪಾಡಿ ಪ್ರಖಂಡ ಸಮಿತಿ ವಿಶ್ವ ಹಿಂದೂ ಪರಿಷದ್ ಕಾರ್ಯದಶಿ೯ ಪ್ರಶಾಂತ್ ಕೊಟ್ಟಾರಿ ಹಾಗೂ ಭವತಿ ಭಿಕ್ಷಾದೇಹಿ ಸಿಂತಾನಿಕಟ್ಟೆ ಪೂಪಾಡಿಕಟ್ಟೆ ತಂಡದ ಕಾರ್ಯಕರ್ತರು ಹಾಗೂ ಧರ್ಮ ಮೃತ್ಯುಂಜಯ ತುಳುನಾಡ್ ತಂಡದ ಕಾರ್ಯಕತ೯ರ ಉಪಸ್ಥಿತಿಯಲ್ಲಿ ಹಸ್ತಾಂತರಿಸಿದರು.

LEAVE A REPLY

Please enter your comment!
Please enter your name here