ಕುಂಟಾಲಫಲ್ಕೆಯ ಅಂಗನವಾಡಿಯಲ್ಲಿ ವಿಶ್ವಹಿಂದೂಪರಿಷದ್ ಬಜರಂಗದಳ ಜೈ ಶ್ರೀ ರಾಮ್ ಶಾಖೆ ಕಾರ್ಯಕರ್ತರಿಂದ ಸ್ವಚ್ಛತೆ, ಬೇಲಿ ಅಳವಡಿಕೆ

0

ಬಂಟ್ವಾಳ: ಸೇವಾ ಸುರಕ್ಷಾ ಸಂಸ್ಕಾರ ಎಂಬ ಧ್ಯೇಯ ವಾಕ್ಯದಂತೆ  ಕುಂಟಾಲಫಲ್ಕೆ ಪೆರಿಯಾರು ದೋಟ ಘಟಕದ ವಿಶ್ವಹಿಂದೂಪರಿಷದ್ ಬಜರಂಗದಳ ಜೈ ಶ್ರೀ ರಾಮ್ ಶಾಖೆ ಕಾರ್ಯಕರ್ತರು ಕುಂಟಾಲಫಲ್ಕೆಯ ಅಂಗನವಾಡಿ ಸೂಕ್ತ ಬೇಲಿಯ ವ್ಯವಸ್ಥೆ ಇಲ್ಲದೆ ಕುಡುಕರ ತಾಣವಾಗಿರುವುದನ್ನು ಮನಗಂಡು ಅಂಗನವಾಡಿಯ ಶಿಕ್ಷಕಿ ಯಶೋಧ ಕುಲಾಲ್ ವಗ್ಗ ಅವರ ಕೋರಿಕೆಯಂತೆ ಸರಕಾರದಿಂದ ದೊರಕಿದ ತಂತಿ ಹಾಗೂ ಸಿಮೆಂಟ್ ಕಂಬದ ಸಹಾಯದಿಂದ ಅಂಗನವಾಡಿಯ ಸುತ್ತ ತಂತಿ ಬೇಲಿ ಅಳವಡಿಸಿಕೊಡಾಲಾಯಿತು.

ಸೇವಾಕಾರ್ಯದಲ್ಲಿ ಬಾಗವಹಿಸಿದ ಎಲ್ಲ ಬಜರಂಗದಳದ ಕಾರ್ಯಕರ್ತರಿಗೂ ಚಾ ತಿಂಡಿಯ ವ್ಯವಸ್ಥೆಯನ್ನು ಯಶೋಧ ಕುಲಾಲ್ ವಗ್ಗ ಮಾಡಿಕೊಟ್ಟರು. ವಿಶ್ವಹಿಂದುಪರಿಷದ್ ಬಜರಂಗದಳದ ಬಂಟ್ವಾಳ ಪ್ರಖಂಡದ ಸಹಸಂಚಾಲಕ ಸಂತೋಷ್ ಸರಪಾಡಿ ಪ್ರವೀಣ್ ಕುಲಾಲ್ ತಾರಿಪಡ್ಪು ಸತೀಶ್ ಕುಲಾಲ್ ಮದ್ವ ಬಿಜೆಪಿಯ ಸದಸ್ಯ ಪ್ರವೀಣ್ ವರೆಕ್ಲೋಡಿ ಹಾಗೂ ಭಜರಂಗದಳದ ಸದಸ್ಯರು ಕಾರ್ಯಕರ್ತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here