ಸೆ.18: ನೇಲ್ಯಪಲ್ಕೆ-ಮಣಿನಾಲ್ಕೂರು ಬಿಲ್ಲವ ಸಮಾಜ ಸೇವಾ ಸಂಘ ಮಹಾಸಭೆ, ಗುರುಪೂಜೆ

0

ಬಂಟ್ವಾಳ: ನೇಲ್ಯಪಲ್ಕೆ ಮಣಿನಾಲ್ಕೂರು ಬಿಲ್ಲವ ಸಮಾಜ ಸೇವಾ ಸಂಘದ ಮಹಾಸಭೆ ಹಾಗೂ ಗುರುಪೂಜೆ ಸೆ.18ರಂದು ನೇಲ್ಯಪಲ್ಕೆ ಬ್ರಹ್ಮ ಶ್ರೀ ನಾರಾಯಣ ಗುರುಮಂದಿರಲ್ಲಿ ನಡೆಯಲಿದ್ದು, ಸಾಯಿಶಾಂತಿ ಕೋಕಳ ಇವರ ಪೌರೋಹಿತ್ಯದಲ್ಲಿ ಧಾರ್ಮಿಕ ಕಾರ್ಯಕ್ರಮ ಜರಗಲಿದೆ. 

ಬೆಳಿಗ್ಗೆ 8 ಗಂಟೆಗೆ ಗಣಹೋಮ ನಡೆದು ಗುರುಪೂಜೆ ನಡೆಯಲಿದೆ. ಬಳಿಕ ಮಹಾಸಭೆ, ನೂತನ ಯುವ ಘಟಕ ರಚನೆ, ನೂತನ ಮಹಿಳಾ ಘಟಕ ರಚನೆ, ಬೂತ್‌ ಪದಾಧಿಕಾರಿಗಳ ಪದಗ್ರಹಣ, ನೂತನ ಪದಾಧಿಕಾರಿಗಳ ಪದಗ್ರಹಣ, ಮುಂದಿನ ಸಂಘದ ಕಾರ್ಯಕ್ರಮಗಳ ಸಮಾಲೋಚನೆ ನಡೆಯಲಿದೆ. ಬಳಿಕ ಬಂಟ್ವಾಳ ಉಪ ತಹಶೀಲ್ದಾರ್‌ ನವೀನ್‌ ರವರು ಸಮಾಜ ಮತ್ತು ಬ್ರಹ್ಮ  ಶ್ರೀ ನಾರಾಯಣಗುರು ಗಳ ಕುರಿತು ಉಪನ್ಯಾಸ ನೀಡಲಿದ್ದಾರೆ.

LEAVE A REPLY

Please enter your comment!
Please enter your name here