ರೋಟರಿ ಕ್ಲಬ್ ಬಂಟ್ವಾಳ ಟೌನ್ ವತಿಯಿಂದ ಶಿಕ್ಷಕರ ದಿನಾಚರಣೆ, ಸನ್ಮಾನ ಕಾರ್ಯಕ್ರಮ

0

ಬಂಟ್ವಾಳ: ರೋಟರಿ ಕ್ಲಬ್ ಬಂಟ್ವಾಳ ಟೌನ್ ಇವರ ಸಹಭಾಗಿತ್ವದಲ್ಲಿ ಸೆ.6ರಂದು ನಡೆದ ಶಿಕ್ಷಕರ ದಿನಾಚರಣೆ ಪ್ರಯುಕ್ತ ಸಂಚಯಗಿರಿ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಸಭಾಂಗಣದಲ್ಲಿ ಬಂಟ್ವಾಳ ತಾಲೂಕಿನ ವಿವಿಧ ಕಡೆಗಳಲ್ಲಿ , ಸಮಾಜ ಸೇವೆಯನ್ನು ಹಾಗೂ ಉತ್ತಮ ಛಾಯಗ್ರಾಹಕರಾಗಿ ಸೇವೆ ಸಲ್ಲಿಸಿದ ಕಾರ್ತಿಕ್ ಸ್ಟೂಡಿಯೋ ಮಾಲಕ ಸತೀಶ್, ಪ್ರಸ್ತುತ ಇವರು ಬಂಟ್ವಾಳದ ಸುದ್ದಿ ವಾಹಿನಿಯ ಬಂಟ್ವಾಳ ತಾಲೂಕು ಛಾಯಗ್ರಾಹಕ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಮತ್ತು ಚಿತ್ರ ಸ್ಟೂಡಿಯೋ ಮಾಲಕ ರಮೇಶ ರಾವ್ ಇವರನ್ನು ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಮತ್ತು ತುಳು ಬದುಕು ವಸ್ತು ಸಂಗ್ರಾಹಲಯದ ಸಂಸ್ಥಾಪಕ ಫ್ರೊ.| ಡಾ| ತುಕರಾಮ ಪೂಜಾರಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ಬಂಟ್ವಾಳ ಟೌನ್ ರೋಟರಿ ಕ್ಲಬ್ ಅಧ್ಯಕ್ಷ ರೊ| ಎಚ್.ಎಂ. ಚಿತ್ತರಂಜನ್ ಶೆಟ್ಟಿ, ಮುಖ್ಯ ಕಾರ್ಯದರ್ಶಿ ಎಚ್‌ಎಫ್. ರೊ| ಕಿಶೋರ್ ಕುಮಾರ್, ಕಾರ್ಯದರ್ಶಿ ರೊ| ಉಮೇಶ್ .ಆರ್ ಮೂಲ್ಯ, ಆನ್ಸ್ ಅಧ್ಯಕ್ಷೆ ವಿದ್ಯಾ ಉಮೇಶ್ ಆರ್. ಮೂಲ್ಯ, ರೊ| ಮಹಮ್ಮದ್ ಹನೀಫ್, ರೊ| ಸುಕುಮಾರ್ ಬಂಟ್ವಾಳ, ರೊ| ಪಿ.ಎಚ್.ಎಫ್. ನಾರಾಯಣ ಸಿ.ಪೆರ್ನೆ, ರೊ| ಮನೋಜ್ ಕುಲಾಲ್, ರೊ| ಮನೋಜ್ ಕನಪಾದೆ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here