ವೀರಕಂಭ: ಹಾಲು ಉತ್ಪಾದಕರ ಸಹಕಾರ ಸಂಘ ನಿಯಮಿತ,ವಾರ್ಷಿಕ ಸಾಮನ್ಯ ಸಭೆ

0

ಕಲ್ಲಡ್ಕ : ಸೆ 4, ವೀರಕಂಬ ಹಾಲು ಉತ್ಪಾದಕರ ಸಹಕಾರ ಸಂಘ ನಿಯಮಿತ ಇದರ 2021 -22 ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯು ಸರಕಾರಿ ಪ್ರಾಥಮಿಕ ಶಾಲೆ ಮಜಿ, ವೀರಕಂಬ ಇಲ್ಲಿ ಜರುಗಿತು. ಸಂಘದ ಅಧ್ಯಕ್ಷ ವೀರಪ್ಪ ಮೂಲ್ಯ ಬೆತ್ತಸರವು ಇವರು ಅಧ್ಯಕ್ಷತೆ ವಹಿಸಿಕೊಂಡಿದ್ದರು.

ಸದರಿ ಸಾಲಿನಲ್ಲಿ ಸಂಘದ ಸದಸ್ಯರಿಗೆ 25 ಶೇಕಡ ಡಿವಿಡೆಂಟ್ ಘೋಷಿಸಲಾಯಿತು. ಕೆಎಂಎಫ್ ವಿಸ್ತರಣೆಧಿಕಾರಿ ಜಗದೀಶ್ , ಲಾಭದಾಯಕ ಹೈನುಗಾರಿಕೆ , ಗುಣಮಟ್ಟದ ಹಾಲು ಪೂರೈಕೆ ,ಸರಕಾರ ಹಾಗೂ ಕೆಎಂಎಫ್ ನಿಂದ ಹೈನುಗಾರಿಕಾ ರೈತರಿಗೆ ಸಿಗುವ ಸವಲತ್ತುಗಳು, ಹೈನುಗಾರಿಕಾ ಪಶುಗಳಿಗೆ ಸಿಗುವ ಜೀವ ವಿಮೆ ಭದ್ರತೆ ಇವುಗಳ ಬಗ್ಗೆ ಸೂಕ್ತ ಮಾಹಿತಿ ಒದಗಿಸಿದರು .ಈ ಸಂದರ್ಭದಲ್ಲಿ ಕಳೆದ ಸಾಲಿನಲ್ಲಿ ಎಸ್ ಎಸ್ ಎಲ್ ಸಿ ಹಾಗೂ ಪಿ ಯು ಸಿ ಯಲ್ಲಿ ಹೆಚ್ಚಿನ ಅಂಕ ಪಡೆದ ಸದಸ್ಯರ ಮಕ್ಕಳನ್ನು ಪುರಸ್ಕರಿಸಲಾಯಿತು. ಹಾಗೂ ಸಂಘಕ್ಕೆ ಹಾಲು ಪೂರೈಸುವ ಸದಸ್ಯರಿಗೆ ಪ್ರೋತ್ಸಾಹಕರ ಉಡುಗೊರೆ ನೀಡಲಾಯಿತು.

ವೇದಿಕೆಯಲ್ಲಿ ಕೆಎಂಎಫ್ ನ ವಿಟ್ಲ ವಲಯ ವಿಸ್ತರಣಾ ಅಧಿಕಾರಿ ಪ್ರಪುಲ್ಲ ಪಿ ಎ, ಸಂಘದ ಉಪಾಧ್ಯಕ್ಷೆ ತೇಜಾಕ್ಷಿ, ನಿರ್ದೇಶಕರುಗಳಾದ ಪದ್ಮನಾಭ ಬಂಗೇರ ಮಜಿ, ನಾರಾಯಣ ಮೂಲ್ಯ ಬೆತ್ತಸರವು ,ಜಯಶೀಲ ಆಳ್ವ, ಉಮೇಶ್ ಎನ್ ಮಜಿ, ಉಮಾವತಿ, ಕೇಶವ ನಾಯ್ಕ ಕೆಮ್ಮಟೆ, ಆನಂದ ಮೂಲ್ಯ ಮೈರಾ, ಮೊದಲಾದವರು ಉಪಸ್ಥಿತರಿದ್ದರು. ಸಂಘದ ಕಾರ್ಯದರ್ಶಿ ಹರೀಶ್ ಬಂಗೇರ ಸ್ವಾಗತಿಸಿ ಸಂಘದ ವರದಿ ವಾಚಿಸಿದರು. ಸಿಬ್ಬಂಧಿ ವೀಣಾ ಸಹಕರಿಸಿದರು.

LEAVE A REPLY

Please enter your comment!
Please enter your name here