ನಂದಾವರ: ರಥ ಸಮರ್ಪಣೆ ಸಮಿತಿ ಅಧ್ಯಕ್ಷರಾಗಿ ಬಿಜೆಪಿ ಮುಖಂಡ ರಾಮದಾಸ್‌ ಬಂಟ್ವಾಳ್‌ ಆಯ್ಕೆ

0

ಬಂಟ್ವಾಳ : ಇಲ್ಲಿನ ಪ್ರಸಿದ್ಧ ನಂದಾವರ ಶ್ರೀ ವಿನಾಯಕ ಶಂಕರನಾರಾಯಣ ದುರ್ಗಾಂಬ ದೇವಸ್ಥಾನಕ್ಕೆ ದೇವಾಡಿಗ ಸಮಾಜದ ವತಿಯಿಂದ ಸಲ್ಲಿಸಲಾಗುವ ನೂತನ ರಥ ಸಮರ್ಪಣಾ ಸಮಿತಿಗೆ ಅಧ್ಯಕ್ಷರಾಗಿ ಬಿಜೆಪಿ ಮುಖಂಡ ರಾಮದಾಸ್ ಬಂಟ್ವಾಳ್ ಆಯ್ಕೆಯಾಗಿದ್ದಾರೆ.


ಈಗಾಗಲೇ ಪೊಳಲಿ ಕ್ಷೇತ್ರಕ್ಕೆ ಆಕರ್ಷಕ ಷಷ್ಠಿ ರಥ ಕೊಡುಗೆ ನೀಡಿದ ದೇವಾಡಿಗ ಸಮಾಜವು ಮುಂದಿನ ವರ್ಷ ಬ್ರಹ್ಮಕಲಶೋತ್ಸವ ನಡೆಯಲಿರುವ ನಂದಾವರ ಕ್ಷೇತ್ರಕ್ಕೆ ನೂತನ ರಥ ಸಮರ್ಪಿಸಲು ಆ.25ರಂದು ಮರ ಕೆತ್ತನೆ ಮುಹೂರ್ತ ನೆರವೇರಿಸಿದರು. ಮಾಗಣೆ ತಂತ್ರಿ ಸುಬ್ರಹ್ಮಣ್ಯ ಭಟ್ ಮತ್ತು ಪ್ರಧಾನ ಅರ್ಚಕ ಮಹೇಶ್ ಭಟ್ ಮಾರ್ಗದರ್ಶನದಲ್ಲಿ ವಿಶೇಷ ಪೂಜೆ ಮತ್ತು ಪ್ರಾರ್ಥನೆ ಸಲ್ಲಿಸಲಾಯಿತು. ಇದೇ ವೇಳೆ ಶಿಲ್ಪಿ ಪೊಳಲಿ ಗಣೇಶ ಆಚಾರ್ಯರಿಗೆ ಸಮಿತಿ ಅಧ್ಯಕ್ಷ ರಾಮದಾಸ್ ಬಂಟ್ವಾಳ್ ವೀಳ್ಯ ನೀಡಿದರು.ಆರ್ ಎಸ್ ಎಸ್ ಮುಖಂಡ ಡಾ.ಕೆ.ಪ್ರಭಾಕರ್ ಭಟ್ ಕಲ್ಲಡ್ಕ, ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ್ ಮೂಡುಬಿದ್ರೆ ಶುಭ ಹಾರೈಸಿದರು.

ಮಾಜಿ ಶಾಸಕ ಎ. ರುಕ್ಮಯ ಪೂಜಾರಿ, ಕೆ. ಪದ್ಮನಾಭ ಕೊಟ್ಟಾರಿ, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷೆ ಕಸ್ತೂರಿ ಪಂಜ, ಸಮಿತಿ ಗೌರವಾಧ್ಯಕ್ಷ ಡಾ. ಸುಂದರ ಮೊಯಿಲಿ, ಗೌರವ ಸಲಹೆಗಾರ ಪದ್ಮನಾಭ ದೇವಾಡಿಗ, ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಅರವಿಂದ ಭಟ್, ಮಾಜಿ ಅಧ್ಯಕ್ಷ ಎ.ಸಿ. ಭಂಡಾರಿ, ಅಭಿವೃದ್ಧಿ ಸಮಿತಿ ಅಧ್ಯಕ್ಷ ಶಶಿರಾಜ್ ರಾವ್ ನೂಜಿ, ಉಪಾಧ್ಯಕ್ಷ ರಾಮ್ ಪ್ರಸಾದ್ ಪೂಂಜಾ, ವಿಜಯಾ ಪ್ರಕಾಶ್, ಸುಧೀರ್ ಕುಮಾರ್ ಬಂಟ್ವಾಳ, ಪ್ರವೀಣ್ ನೆಟ್ಲ, ವಿಶ್ವನಾಥ ಆಳ್ವ, ಅರುಣ್ ಕುಮಾರ್, ದಾಮೋದರ್ ಬಿ.ಎಂ., ಮೋಹನ ದಾಸ ಹೆಗ್ಡೆ, ದೇವಪ್ಪ ನಾಯ್ಕ, ಜಯ ಅಶೋಕ ಗಟ್ಟಿ, ಜಯಶಂಕರ ಬಾಸ್ರಿತ್ತಾಯ, ಸಮಿತಿ ಪ್ರಧಾನ ಕಾರ್ಯದರ್ಶಿ ಸದಾಶಿವ ಮೊಯಿಲಿ ಬೆಂಜನಪದವು, ಸಂತೋಷ್ ದೇವಾಡಿಗ, ಮುರಳಿ ದೇವಾಡಿಗ, ರಾಜು ಮೊಯಿಲಿ, ಚಂದ್ರಾವತಿ ದೇವಾಡಿಗ ಪೊಳಲಿ, ಗಣೇಶ್ ದೇವಾಡಿಗ ಮಂಡಾಡಿ, ರಕ್ಷಿತ್ ಕೆಂಬಾರ್, ಸುನೀತ, ಸುರೇಶ್, ಯಶವಂತ್ ವಿಟ್ಲ, ಪ್ರಮೀಳ ದೇವಾಡಿಗ, ಪ್ರವೀಣ್ ತುಂಬೆ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here