ಬಂಟ್ವಾಳ ಕಾಂಗ್ರೆಸ್ ಸಮಿತಿ ವತಿಯಿಂದ ,ಮಾಜಿ ಸಚಿವ ಬಿ.ರಮಾನಾಥ ರೈ ನೇತೃತ್ವದಲ್ಲಿ ಕಾಲ್ನಡಿಗೆ ಜಾಥ

0

ಬಂಟ್ವಾಳ : ಬಂಟ್ವಾಳ ಹಾಗೂ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಮಾಜಿ ಸಚಿವ ಬಿ. ರಮಾನಾಥ ರೈ  ನೇತೃತ್ವದಲ್ಲಿ ಭಾರತೀಯ ಕಾಂಗ್ರೆಸ್ ಪಕ್ಷ ೭೫ನೇ ಸ್ವಾತಂತ್ರ್ಯ ಸಂಭ್ರಮಾಚರಣೆಯನ್ನು ವೈಭವ ಪೂರ್ಣವಾಗಿ ಆಚರಿಸುವ ಸಲುವಾಗಿ ಸ್ವಾತಂತ್ರ್ಯ ಸಂಗ್ರಾಮ ವೀರ ಯೋಧರ ತ್ಯಾಗ ಬಲಿದಾನ ಹಾಗೂ ದೇಶಕ್ಕೆ ಶಾಂತಿ ಸಾಮರಸ್ಯ ಸಾರುವ ನಿಟ್ಟಿನಲ್ಲಿ ಮಣಿಹಳ್ಳ ಜಂಕ್ಷನ್‌ನಿಂದ ಜಕ್ರಿಬೆಟ್ಟು ಬಂಟ್ವಾಳ ಪೇಟೆ ನಾರಾಯಣ ಗುರು ವೃತ್ತ , ಶ್ರೀ ಸತ್ಯ ದೇವತಾ ಕಲ್ಲುರ್ಟಿ ದೈವಸ್ಥಾನ, ಮೆಲ್ಕಾರ್ ಜಂಕ್ಷನ್, ಆಲಾಡ್ಕ, ಪಾಣೆಮಂಗಳೂರು ಪೇಟೆ, ಗೂಡಿನ ಬಳಿ, ಬಿ.ಸಿ.ರೋಡ್ ಜಂಕ್ಷನ್‌ನಿಂದ ಕೈಕಂಬದವರೆಗೆ ಕಾಲ್ನಡಿಗೆ ಜಾಥವು ನಡೆಯಿತು.

ಈ ಮೆರವಣಿಗೆಯಲ್ಲಿ ಮಾಜಿ ಶಾಸಕ, ಸಚಿವ ರಮಾನಾಥ ರೈ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಕಾರ್ಯದರ್ಶಿ ರಕ್ಷಿತ್ ಶಿವರಾಮ್, ಸರಪಾಡಿ ಜಿ.ಪಂ. ಅಧ್ಯಕ್ಷ ಪದ್ಮಶೇಖರ್ ಜೈನ್, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧೀಪ್ ಕುಮಾರ್ ಶೆಟ್ಟಿ ಮಾಣಿ, ಪಿಯುಸ್ ಎಲ್. ರೋಡ್ರಿಗಸ್, ಗೋಳ್ತಮಜಲು ಜಿ.ಪಂ. ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಕೊಳ್ನಾಡು ಜಿ.ಪಂ. ಸದಸ್ಯ ಎಂ. ಎಸ್.ಮಹಮ್ಮದ್, ಮಾಣಿ ಗ್ರಾ.ಪಂ.ಅಧ್ಯಕ್ಷ ಬಾಲಕೃಷ್ಣ ಆಳ್ವ ಕೊಡಾಜೆ, ಮಾಯಿಲಪ್ಪ ಸಾಲ್ಯಾನ್ , ರಾಜಶೇಖರ್ ರೈ ಕಳ್ಳಿಗೆ, ದಿವಾಕರ ಪಂಬದ ಬೆಟ್ಟು, ಮಮತಾ ಗಟ್ಟಿ, ಸುದರ್ಶನ್ ಜೈನ್, ಚಿತ್ತರಂಜನ್ ಶೆಟ್ಟಿ, ದಿವ್ಯಾ ಪ್ರಭ ಗೌಡ ಚಿಲ್ತಡ್ಕ, ಜಯಂತಿ ಪೂಜಾರಿ, ಅಬ್ಬಸಾಲಿ, ಸುಭಾಶ್ಚಂದ್ರ ಶೆಟ್ಟಿ ಕುರ್ನಾಡು, ಹರ್ಷದ್ ಸರಾವು, ಇಬ್ರಾಹಿಂ ನವಾಜ್ ಬಡಕಬೈಲು, ಸುರೇಶ್, ಶರೀಫ್ ಶಾಂತಿ ಅಂಗಡಿ, ಹುಸೈನಾರ್ ಶಾಂತಿ ಅಂಗಡಿ, ಅಬೂಬಕ್ಕರ್ ಸಿದ್ದಿಕ್ ಬೋಗೋಡಿ, ಉಮಾನಾಥ ಶೆಟ್ಟಿ, ಸ್ವರ್ಣ ಕುಮಾರ್ ಜೈನ್ ಅಲ್ಲಿಪಾದೆ, ಪುರುಷೋತ್ತಮ ಅಲ್ಲಿಪಾದೆ, ಉಮೇಶ್ ಕುಲಾಲ್ ನಾವೂರ, ಬಾಲಕೃಷ್ಣ ಪೆರಿಯಪಾದೆ, ಸದಾಶಿವ ಬಂಗೇರ, ಮಹಮ್ಮದ್ ನಂದರಬೆಟ್ಟು, ಲೋಲಾಕ್ಷ, ಐಡಾ ಸುರೇಶ್, ಜಾಸ್ಮೀನ್ ಪಿಂಟೊ, ಯೂಸೂಫ್ ಕರಂದಾಡಿ, ಈಶ್ವರ ಭಟ್ ಪುತ್ತೂರು, ಮಹಮ್ಮದ್ ನಂದಾವರ, ರಝಾಕ್ ಕುಕ್ಕಾಜೆ, ಸಿದ್ದಿಕ್ ಸರವು, ಅನ್ವರ್ ಕಾಸಿಂ, ಫಾರೂಕ್ ಬಯಬೆ, ಹನೀಫ್ ಪುಂಚತಾರ್, ಪಿ.ಎ. ರಹೀಂ ಬಿ.ಸಿ.ರೋಡ್, ಕೆ. ಶ್ರೀಧರ ರೈ, ನಿರಂಜನ್ ರೈ, ಕಾಂಗ್ರೆಸ್ ಸೇವಾ ದಳದ ಜಿಲ್ಲಾಧ್ಯಕ್ಷ ಜೋಕಿಂ ಡಿಸೋಜ, ಜಿಲ್ಲಾ ಪದಾಧಿಕಾರಿಗಳಾದ ಝೈಬೇರ್ ತಲಮುಗೇರ್, ಮಧುಸೂದನ್ ಭಟ್, ವೆಂಕಪ್ಪ ಪೂಜಾರಿ, ಶಮೀರ್ ಅಬ್ದುಲ್ ಜಿ.ಎಂ., ಚಂದ್ರಕಲಾ ರಾವ್ ಹಾಗೂ ಚಂದ್ರಕಲಾ ಜೋಗಿ, ಸಂಪತ್ ಕುಮಾರ್ ಮತ್ತಿತರರು ಭಾಗವಹಿಸಿದ್ದರು.

ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್ ಸ್ವಾಗತಿಸಿ, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್ ಮಾಣಿ ವಂದಿಸಿದರು.

LEAVE A REPLY

Please enter your comment!
Please enter your name here