ಕಡೇಶಿವಾಲಯ ಶಾಲೆಯಲ್ಲಿ ವಾಲಿಬಾಲ್‌ ಪಂದ್ಯಾಟ

0

ಕಡೇಶಿವಾಲಯ: ಇಲ್ಲಿನ ಕಡೇಶಿವಲಾಯ ಸರಕಾರಿ ಹಿರಿಯ ಪ್ರೌಢ ಶಾಲೆಯಲ್ಲಿ ಕಲ್ಲಡ್ಕ ವಲಯ ಮಟ್ಟದ ಪ್ರೌಢಶಾಲಾ ವಿಭಾಗದ ವಾಲಿಬಾಲ್ ಪಂದ್ಯಾಟ ಇತ್ತೀಚೆಗೆ ಸರಕಾರಿ ಪ್ರೌಢಶಾಲೆ ಕಡೇಶಿವಾಲಯದಲ್ಲಿ ನಡೆಯಿತು. ಎಸ್ ಡಿ ಎಮ್ ಸಿ ಕಾರ್ಯಾಧ್ಯಕ್ಷ ಕೆ ತಿರುಮಲೇಶ್ವರ ಭಟ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ನಿವೃತ್ತ ಮುಖ್ಯೋಪಾಧ್ಯಾಯ ಗಿರಿಯಪ್ಪ ಗೌಡ, ವಿಶ್ರಾಂತ ದೈಹಿಕ ಶಿಕ್ಷಣ ಶಿಕ್ಷಕರು ಶಂಕರ್ ವಿ ಕಲ್ಲಡ್ಕ, ಎಸ್ ಡಿ ಎಮ್ ಸಿ ಯ ಸದಸ್ಯರಾದ ಈಶ್ವರ ಪೂಜಾರಿ ಹಿರ್ತಡ್ಕ, ಲೋಕನಾಥ ತಿಮರಾಜೆ ಉಪಸ್ಥಿತರಿದ್ದರು.

ನಂತರ ನಡೆದ ಬಾಲಕ- ಬಾಲಕಿಯರ ವಾಲಿಬಾಲ್ ಪಂದ್ಯಾಟದಲ್ಲಿ ಬಾಲಕರ ವಿಭಾಗದಲ್ಲಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆ ಮಾಣಿ ಪ್ರಥಮ, ಸರಕಾರಿ ಪ್ರೌಢಶಾಲೆ ಕಡೇಶಿವಾಲಯ ಧ್ವಿತೀಯ ಸ್ಥಾನ ತನ್ನದಾಗಿಸಿತು. ಬಾಲಕಿಯರ ವಿಭಾಗದಲ್ಲಿ ಸರಕಾರಿ ಪ್ರೌಡಶಾಲಾ ಕಡೇಶಿವಾಲಯ ಪ್ರಥಮ, ದೇವಿಕಾ ಆಂಗ್ಲಮಾಧ್ಯಮ ಶಾಲೆ ಅಮ್ಟೂರು ದ್ವಿತೀಯ ಸ್ಥಾನ ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಗೊಂಡವು. ಶಾಲೆಯ ಮುಖ್ಯೋಪಾಧ್ಯಾಯ ಲೋಕಾನಂದ್ ಎನ್ ದೈಹಿಕ ಶಿಕ್ಷಕ ಕೃಷ್ಣಪ್ರಸಾದ್, ಶಿಕ್ಷಕರಾದ ಸತೀಸ್ ಎನ್ ಎಸ್, ದರ್ಶನ್, ಚೈತ್ರಾ, ಗೀತಾ ಕುಮಾರಿ, ವಿಧ್ಯಾ, ಲತಾ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here