ಲೋಕೋಪಯೋಗಿ ಉಪವಿಭಾಗದ ಸಹಾಯಕ ಇಂಜಿನಿಯರ್‌ ಅಮೃತ್‌ಕುಮಾರ್ ಸಿ.ಆರ್ ಬೀಳ್ಕೊಡುಗೆ ಸಮಾರಂಭ

0

ಬಂಟ್ವಾಳ :ಲೋಕೋಪಯೋಗಿ ಇಲಾಖೆಯಲ್ಲಿ ಸುಮಾರು 19 ವರ್ಷ ಸರಕಾರಿ ಸೇವೆ ಸಲ್ಲಿಸಿ ಇದೀಗ ಬಂಟ್ವಾಳ ಲೋಕೋಪಯೋಗಿ ಉಪವಿಭಾಗದಲ್ಲಿ ನಿವೃತ್ತಿ ಹೊಂದಿರುವ ಸಹಾಯಕ ಇಂಜಿನಿಯರ್‌ ಅಮೃತ್‌ಕುಮಾರ್ ಸಿ.ಆರ್ ರವರ ಬೀಳ್ಕೊಡುಗೆ ಸಮಾರಂಭವು ಲೋಕೋಪಯೋಗಿ ಉಪವಿಭಾಗ ಸಭಾಂಣದಲ್ಲಿ ಜರಗಿತು.


ಲೋಕೋಪಯೋಗಿ ಇಲಾಖೆಯ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಜೈ ಪ್ರಕಾಶ್‌ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪಿ.ಆರ್.ಇ.ಡಿ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ತಾರನಾಥ ಸಾಲಿಯಾನ್, ಕುಡಿಯುವ ನೀರು ಹಾಗೂ ನೈರ್ಮಲ್ಯ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಜಿ.ಕೆ.ನಾಯಕ್, ಸಹಾಯಕ‌ ಅಭಿಯಂತರುಗಳಾದ ಪ್ರೀತಂ, ಮನೋಜ್, ವಿವೇಕಾನಂದ ರೆಡ್ಡಿ , ಅಮೃತ್‌ ಕುಮಾರ್‌ ಧರ್ಮಪತ್ನಿ ಕಲೈವಾಣಿ , ಪಿ.ಆರ್.ಇ.ಡಿ ಉಪವಿಭಾಗ ಅಭಿಯಂತರರಾದ ಕೃಷ್ಣ, ಜಗದೀಶ, ಕುಶಕುಮಾರ್, ನಾಗೇಶ್, ಲೋಕೋಪಯೋಗಿ ಕಚೇರಿ ಸಿಬ್ಬಂದಿಗಳು ಮತ್ತು ಗುತ್ತಿಗೆದಾರರು ಉಪಸ್ಥಿತರಿದ್ದರು.


ಮನೋಜ್ ವಂದಿಸಿ ಅರುಣ್‌ಪ್ರಕಾಶ್ ಸ್ವಾಗತಿಸಿ,ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here