ಅಪಘಾತದಲ್ಲಿ ಗಾಯಗೊಂಡಿದ್ದ ಭಜರಂಗದಳ ಕಾರ್ಯಕರ್ತನಿಗೆ ನೆರವಿನ ಹಸ್ತ

0

ಬಂಟ್ವಾಳ: ಅಪಘಾತವೊಂದರಲ್ಲಿ ಗಾಯಗೊಂಡು, ಮನೆಯಲ್ಲಿದ್ದು ಕಷ್ಟದ ಜೀವನ ಸಾಗಿಸುತ್ತಿದ್ದ ಭಜರಂಗದಳದ ಕಾರ್ಯಕರ್ತರೊಬ್ಬರಿಗೆ ನೆರವಾಗುವ ಮೂಲಕ ಕುಂಟಾಲಫಲ್ಕೆ ಪೆರಿಯಾರು ದೋಟ ವಿಶ್ವ ಹಿಂದೂ ಪರಿಷತ್‌ ಮತ್ತು ಭಜರಂಗದಳ ಘಟಕ ಕರ್ತವ್ಯಪ್ರಜ್ಞೆ ಮೆರೆದಿದೆ.


ಅಪಘಾತವೊಂದರಲ್ಲಿ ಗಾಯಗೊಂಡು, ಉದ್ಯೋಗವಿಲ್ಲದೆ ಮನೆಯಲ್ಲಿಯೇ ಇದ್ದು ಕಷ್ಟದ ಜೀವನ ನಡೆಸುತ್ತಿದ್ದ ಪ್ರದೀಪ್‌ ಭಾವಂತಬೆಟ್ಟು ಅವರಿಗೆ ಸುಮಾರು 58 ಸಾವಿರ ರೂಪಾಯಿ ನೆರವನ್ನು ಭಜರಂಗದಳ ಪುತ್ತೂರು ಜಿಲ್ಲಾ ಸಂಚಾಲಕರಾದ ಗುರುರಾಜ್‌ ಬಂಟ್ವಾಳ, ಪ್ರಸಾದ್‌ ಕುಮಾರ್‌ ರೈ ಸಮ್ಮುಖದಲ್ಲಿ ಹಸ್ತಾಂತರ ಮಾಡಲಾಯಿತು.
ಭಜರಂಗದಳ ಪುತ್ತೂರು ಜಿಲ್ಲಾ ಸಂಚಾಲಕರಾದ ಭರತ್‌ ಕುಮ್ದೇಲ್‌, ಶಿವಪ್ರಸಾದ್‌ ತುಂಬೆ, ಸಂತೋಷ್‌ ಸರಪಾಡಿ, ಕಿರಣ್‌ ಕುಮ್ದೇಲ್‌, ಪ್ರಸಾದ್‌ ಬೆಂಜನಪದವು, ಪ್ರವೀಣ್‌ ಕುಂಟಾಲಫಲ್ಕೆ, ಭಜರಂಗದಳ ಸದಸ್ಯರು, ಕಾರ್ಯಕರ್ತರು, ಬಿಜೆಪಿ ಸದಸ್ಯರು, ಕಾರ್ಯಕರ್ತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here