ಶ್ರೀ ಅನ್ನಪೂರ್ಣೆಶ್ವರೀ ನಾಗದೇವರ ದೇವಸ್ಥಾನ ಟ್ರಸ್ಟ್ ಅಧ್ಯಕ್ಷರಾಗಿ ಭುವನೇಶ್ ಪಚ್ಚಿನಡ್ಕ

0

ಬಂಟ್ವಾಳ : ಶ್ರೀ ಅನ್ನಪೂರ್ಣೆಶ್ವರೀ ನಾಗದೇವರ ದೇವಸ್ಥಾನ ಟ್ರಸ್ಟ್ ಪೊಲೀಸ್ ಲೈನ್ ಬಿ.ಸಿ.ರೋಡ್ ಇದರ ಆಡಳಿತ ಮಂಡಳಿಯ ಸಭೆಯು ಎ. 6 ರಂದು ಕ್ಷೇತ್ರದ ಸಭಾಭವನದಲ್ಲಿ ನಡೆಯಿತು.


ಈ ಸಭೆಯಲ್ಲಿ ಆಡಳಿತ ಮಂಡಳಿಯ ನೂತನ ಅಧ್ಯಕ್ಷರನ್ನಾಗಿ ಭುವನೇಶ್ ಪಚ್ಚಿನಡ್ಕ ಇವರನ್ನು ಆಯ್ಕೆ ಮಾಡಲಾಯಿತು.


ಗೌರವಾಧ್ಯಕ್ಷರಾಗಿ ಜಗನ್ನಾಥ ಚೌಟ, ಉಪಾಧ್ಯಕ್ಷರುಗಳಾಗಿ ಆನಂದ ಕೆ. ಮತ್ತು ಕೇಪುಗೌಡ ಇವರುಗಳನ್ನು ಆಯ್ಕೆ ಮಾಡಲಾಯಿತು. ಕಾರ್ಯದರ್ಶಿಗಳಾಗಿ ಜಗನ್ನಾಥ ಶೆಟ್ಟಿ, ಜೊತೆಕಾರ್ಯದರ್ಶಿಗಳಾಗಿ ದಿನೇಶ್ ಕುಮಾರ್, ಖಜಾಂಚಿಯಾಗಿ ಮುರುಗೇಶ್, ಕಾನೂನು ಸಲಹೆಗಾರರಾಗಿ ಉಮೇಶ್ ಕುಮಾರ್ ವೈ, ನರೇಂದ್ರನಾಥ ಭಂಡಾರಿ ಆಯ್ಕೆಯಾದರು.
ಸೇವಾ ಸಮಿತಿ ಸದಸ್ಯರುಗಳಾಗಿ ಗಿರೀಶ್, ದೇವಿದಾಸ್ ಭಟ್, ಪಾಂಡುರಂಗ ಶೆಣೈ, ಕೃಷ್ಣ ಕುಲಾಲ್, ನರೇಶ್ ಶೆಟ್ಟಿ, ಜಯಕುಮಾರ್, ಪುಷ್ಪರಾಜ ಶೆಟ್ಟಿ, ಪದ್ಮನಾಭ ಗೌಡ, ಚಂದ್ರಹಾಸ ಶೆಟ್ಟಿ, ಕಿಟ್ಟು ಮೂಲ್ಯ, ಸದಾಶಿವ ಬಂಗೇರ, ಸೀತಾರಾಮ, ನಾಗೇಶ್, ಗಿರೀಶ್ ಪೈ, ಪ್ರವೀಣ್ ಕುಮಾರ್, ರಮಾನಂದ ಇವರುಗಳು ಆಯ್ಕೆಯಾದರು.

LEAVE A REPLY

Please enter your comment!
Please enter your name here