ಬಂಟ್ವಾಳ :ಓಂ ಶ್ರೀ ಗೆಳೆಯರ ಬಳಗ ನಾಯಿಲ ಇದರ ವಾರ್ಷಿಕ ಸಭೆಯು ನಾಗೇಶ್ ಕುಲಾಲ್ ಇವರ ಅಧ್ಯಕ್ಷತೆಯಲ್ಲಿ ಜರಗಿತು. ಸಭೆಯಲ್ಲಿ ಓಂ ಶ್ರೀ ಗೆಳೆಯರ ಬಳಗದ ನೂತನ ಅಧ್ಯಕ್ಷರಾಗಿ ಪ್ರವೀಣ್ ಭಂಡಾರಿ ನಾಯಿಲ ರವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಪ್ರವೀಣ್ಕುಲಾಲ್ ನಾಯಿಲ, ಪ್ರಧಾನ ಕಾರ್ಯದರ್ಶಿಯಾಗಿ ರಂಜಿತ್.ಕೆ.ನಾಯಿಲ, ಜತೆ ಕಾರ್ಯದರ್ಶಿ ಯಾಗಿ ನವೀನ್ ಕುಲಾಲ್ ನಾಯಿಲ, ಕ್ರೀಡಾ ಕಾರ್ಯದರ್ಶಿಯಾಗಿ ಧನುಶ್ ಸುವರ್ಣ ನಾಯಿಲ, ಸಂಘಟನಾ ಕಾರ್ಯದರ್ಶಿ ಯಾಗಿ ಕರುಣಾಕರ ಕುಲಾಲ್ ಪಲ್ಲತ್ತಿಲ ಮತ್ತು ಕೋಶಾಧಿಕಾರಿಯಾಗಿ ಕರುಣಾಕರ ಕುಲಾಲ್ ನಾಯಿಲ ಇವರನ್ನು ಸರ್ವಾನುಮತದಿಂದ ಆಯ್ಕೆಮಾಡಲಾಯಿತು.