ಮಾಣಿ ಸಂತೆ ಮಾರುಕಟ್ಟೆಯ ಬಳಿ ಪಾರ್ಕ್‌ ಮಾಡಿದ್ದ ಬೈಕ್‌ ಕಳವು

0

ಮಾಣಿ: ಮಾಣಿ ಸಂತೆ ಮಾರುಕಟ್ಟೆಯ ಬಳಿ ಪಾರ್ಕ್‌ ಮಾಡಿದ್ದ ಬಜಾಜ್‌ ಪಲ್ಸರ್‌ ಬೈಕ್‌ (ನಂಬ್ರ KA-03-HH-8001) ಕಾಣೆಯಾಗಿದ್ದು, ವಿಟ್ಲ ಠಾಣೆಯಲ್ಲಿ ದೂರು ದಾಖಲಾಗಿದೆ. ಕಡೇಶಿವಾಲಯದ ಪೆರ್ಲಾಪ್‌ ಚಿನ್ನಯಕಟ್ಟೆ ಮನೆ ನಿವಾಸಿ ಮನೀಶ್‌ ಆಚಾರ್ಯ ಬೈಕ್‌ ಕಳೆದುಕೊಂಡ ವ್ಯಕ್ತಿ.

ಬಂಟ್ವಾಳದ ಸ. ಪಾಲಿಟೆಕ್ನಿಕ್‌ ಕಾಲೇಜನಲ್ಲಿ ಸಿವಿಲ್‌ ಇಂಜಿನಿಯರಿಂಗ್‌ ಡಿಪ್ಲೋಮಾ ಪಡೆದ ಮನೀಶ್‌ಗೆ ಮಂಗಳೂರಿನ ಖಾಸಗಿ ಕನ್ಸ್ಟ್ರಕ್ಸನ್‌ ಕಂಪೆನಿಯೊಂದರಲ್ಲಿ ಸೈಟ್‌ ಇಂಜಿನಿಯರ್‌ ಆಗಿ ಕೆಲಸ ದೊರಕಿತ್ತು. ಕಡೇಶಿವಾಲಯದಿಂದ ಮಂಗಳೂರಿಗೆ ತೆರಳಲು ಪ್ರತಿನಿತ್ಯ ತನ್ನ ಬೈಕ್‌ ನಲ್ಲಿ ಮಾಣಿಗೆ ಬೆಳಿಗ್ಗೆ ಸುಮಾರು 6.30ರ ವೇಳೆಗೆ ಬರುತ್ತಿದ್ದ ಮನೀಶ್‌ ಮಾಣಿ ಮಾರುಕಟ್ಟೆಯ ನಿರ್ದಿಷ್ಟ ಜಾಗದಲ್ಲಿ ಬೈಕ್‌ ಪಾರ್ಕ್‌ ಮಾಡಿ ಬಸ್ಸಿನಲ್ಲಿ ಮಂಗಳೂರಿಗೆ ಹೋಗುತ್ತಿದ್ದರು. ಸಂಜೆ ಕೆಲಸ ಮುಗಿಸಿ 7.30ರ ವೇಳೆಗೆ ಮಾಣಿಗೆ ಬಂದು ಬೈಕ್‌ ನಲ್ಲಿ ಮನೆಗೆ ಹೋಗುವುದು ಮನೀಶ್‌ ನಿತ್ಯ ಕಾಯಕ ಆದರೆ ಫೆ.13ರಂದು ಮಾಣಿ ಸಂತೆ ಮಾರುಕಟ್ಟೆಯಲ್ಲಿ ಬೈಕ್‌ ಪಾರ್ಕ್‌ ಮಾಡಿ ಮಂಗಳೂರಿಗೆ ಹೋಗಿ ಬಂದ ಮನೀಶ್‌ ಗೆ ಇಟ್ಟ ಜಾಗದಲ್ಲಿ ಬೈಕ್‌ ಕಾಣದೆ ಆಘಾತವಾಗಿದೆ. ಅಲ್ಲಿ ಇಲ್ಲಿ ವಿಚಾರಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ವಿಟ್ಲ ಠಾಣೆಯಲ್ಲಿ ಈ ಕುರಿತು ದೂರು ದಾಖಲಾಗಿದೆ. ಪಾರ್ಕ್‌ ಮಾಡಿದ ಸ್ಥಳದ ಅಕ್ಕಪಕ್ಕದಲ್ಲಿ ಸಿಸಿಟಿವಿ ಇಲ್ಲದಿರುವುದು ಪೊಲೀಸರಿಗೂ ಸಮಸ್ಯೆಯಾಗಿ ಕಾಡಿದೆ, ಮನೀಶ್‌ ಬೈಕ್‌ ಸಿಗಬಹುದೆಂಬ ನಿರೀಕ್ಷಯೆಲ್ಲಿದ್ದಾರೆ.

LEAVE A REPLY

Please enter your comment!
Please enter your name here