KSTA ಕಲ್ಲಡ್ಕ ಮಾಣಿ ವಲಯ ಸಮಿತಿ ಪುನಃ ರಚನೆ

0

ಬಂಟ್ವಾಳ: ಕರ್ನಾಟಕ ಸ್ಟೇಟ್ ಟೈಲರ್‍ಸ್ ಎಸೋಸಿಯೇಶನ್ ಕಲ್ಲಡ್ಕ ಮಾಣಿ ವಲಯ ಸಮಿತಿಯ ಮಹಾಸಭೆಯು ಕಲ್ಲಡ್ಕ ನೇತಾಜಿ ಸ್ಮೃತಿ ಭವನದಲ್ಲಿ ವಸಂತ ಪೂಜಾರಿ ನಿಟಿಲಾಪುರ ಅಧ್ಯಕ್ಷತೆಯಲ್ಲಿ ಫೆ.14ರಂದು ನಡೆಯಿತು.
ರಾಜ್ಯ ಸಮಿತಿಯ ಅಧ್ಯಕ್ಷ ಬಿ.ಎ. ನಾರಾಯಣ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.

ಸಭೆಯಲ್ಲಿ ೨೦೨೩-೨೪ನೇ ಅವಧಿಗೆ ಕಲ್ಲಡ್ಕ ಮಾಣಿ ವಲಯವನ್ನು ಪುನಃ ರಚಿಸಲಾಯಿತು.


ಅಧ್ಯಕ್ಷರಾಗಿ ಪ್ರದೀಪ್ ಶೆಟ್ಟಿ ಮಾಣಿ, ಉಪಾಧ್ಯಕ್ಷರಾಗಿ ಕೇಶವ ಪೂಜಾರಿ ಬುಡೋಳಿ, ದೇವಕಿ ಅಮ್ಟೂರು, ಕಾರ್ಯದರ್ಶಿಯಾಗಿ ನೀತಾ ನೇರಳಕಟ್ಟೆ, ಜೊತೆ ಕಾರ್ಯದರ್ಶಿ ಬಬಿತಾ ಕಡೇಶ್ವಾಲ್ಯ, ಭಾರತಿ ನೇರಳಕಟ್ಟೆ , ಶ್ರೀಧರ ಬಿಂದು, ಕೋಶಾಧಿಕಾರಿಯಾಗಿ ಶ್ರೀಲತಾ ಐತಾಳ್, ಸಂಘಟನಾ ಕಾರ್ಯದರ್ಶಿಯಾಗಿ ಸತ್ಯವತಿ, ಎನ್. ಸಿ.. ಹಮೀದ್, ಪದ್ಮನಾಭ ಶೆಟ್ಟಿ, ದಿವ್ಯ ಕಲ್ಲಡ್ಕ, ಯಶೋಧ ಮತ್ತು ಕಾರ್ಯಕಾರಿಣಿ ಸದಸ್ಯರಾಗಿ ವಸಂತ ಕಲ್ಲಡ್ಕ, ಉಮೇಶ್ ಸಾಲಿಯಾನ್, ವೆಂಕಪ್ಪ ಬೆಳ್ಚಾಡ, ಗೋಪಾಲ ಮಾಣಿ , ಕೃಷ್ಣ ರಾಜೇಂದ್ರ ಕುಮಾರ್, ವೀಣಾ ಅನಂತಾಡಿ, ರಾಧಿಕಾ ನಾರಾಯಣ ಟೈಲರ್, ಜಯಕರ, ವೈಲೆಟ್ ಮೊಂತೆರೋ, ಕೆ. ಚಂದ್ರಾವತಿ, ಸುಚಿತ್ರ ಮೋನಪ್ಪ ದೇವಸ್ಯ, ನವೀನ ದಾಸಕೋಡಿ, ಜನಾರ್ಧನ, ವನಿತ ಕರುಣಾಕರ, ನಂದಿತ ಶೆಟ್ಟಿಯವರನ್ನು ಆಯ್ಕೆ ಮಾಡಲಾಯಿತು.


ಇದೇ ವೇಳೆ ಹಿರಿಯ ಸದಸ್ಯರಾದ ನಾರಾಯಣ ಟೈಲರ್ ಬೋಳಂತೂರು, ಡೊಂಬಯ್ಯ ಟೈಲರ್ ಕಲ್ಲಡ್ಕ , ಆನಂದ ಪೂಜಾರಿ ಸೂರಿಕುಮೇರು, ದೇವಕಿ ದಿವಾಕರ ಪೂಜಾರಿ ಅಮ್ಟೂರು, ಭಾಗ್ಯ ನಾಯಕ್ ನೇರಳಕಟ್ಟೆ,ಶ್ರೀನಿಧಿ ಭಟ್ ಕೊಳಕೀರು ಇವರ ಸಾಧನೆಯನ್ನು ಗುರುತಿಸಿ ಸನ್ಮಾನಿಸಲಾಯಿತು.


ಪುಟ್ಟ ಮಕ್ಕಳು ಪ್ರಾರ್ಥನೆ ಮಾಡಿದರು. ಅಧ್ಯಕ್ಷ ವಸಂತ ಪೂಜಾರಿ ಸ್ವಾಗತಿಸಿ, ಕೆ. ಚಂದ್ರಾವತಿ ವರದಿ ವಾಚಿಸಿದರು, ಪ್ರದೀಪ್ ಶೆಟ್ಟಿ ಲೆಕ್ಕ ಪತ್ರ ಮಂಡಿಸಿದರು, ಕಸ್ತೂರಿ ಪಿ. ಶೆಟ್ಟಿ ನಿರೂಪಿಸಿ, ವಂದಿಸಿದರು.

ರಾಜ್ಯ ಸಮಿತಿ ಪ್ರಧಾನ ಕಾರ್ಯದರ್ಶಿ ಪ್ರಜ್ವಲ್ ಕುಮಾರ್, ರಾಜ್ಯ ಉಪಾಧ್ಯಕ್ಷ ಸುರೇಶ್ ಸಾಲಿಯಾನ್, ಜಿಲ್ಲಾ ಅಧ್ಯಕ್ಷ ಜಯಂತ ಉರ್ಲಾಂಡಿ, ಜಿಲ್ಲಾ ಪ್ರ. ಕಾರ್ಯದರ್ಶಿ ಲಿಗೋಧರ ಸುಳ್ಯ, ಜಿಲ್ಲಾ ಕೋಶಾಧಿಕಾರಿ ಈಶ್ವರ ಕುಲಾಲ್, ಬಂಟ್ವಾಳ ಕ್ಷೇತ್ರ ಸಮಿತಿಯ ಪ್ರ.ಕಾರ್ಯದರ್ಶಿ ಯಾದೇಶ್ ತುಂಬೆ, ಬಂಟ್ವಾಳ ಕ್ಷೇತ್ರ ಸಮಿತಿಯ ಕೋಶಾಧಿಕಾರಿ ತುಳಸಿ ಆರ್. , ಜಿಲ್ಲಾ ಸದಸ್ಯ ಗಂಗಯ್ಯ ಫರಂಗಿಪೇಟೆ, ನೇತಾಜಿ ಯುವಕ ಮಂಡಲದ ಗೌರವಾಧ್ಯಕ್ಷ ನಾಗೇಶ್ ಕಲ್ಲಡ್ಕ, ಕ್ಷೇತ್ರ ಸಮಿತಿ ಸದಸ್ಯೆ ಶ್ರೀಲತಾ , ವೈಲೆಟ್ ಮೊಂತೆರೋ, ಉಮೇಶ್ ಸಾಲಿಯಾನ್ , ಕಲ್ಲಡ್ಕ ವಲಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಶೆಟ್ಟಿ, ವಲಯ ಕೋಶಾಧಿಕಾರಿ ಕೆ. ಚಂದ್ರಾವತಿ, ಎನ್. ಸಿ. ಅಬ್ದುಲ್ ಹಮೀದ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here