ತುಂಬೆ ರಾಮನಗರ ಸಮಾಲೋಚನಾ ಸಭೆ

0

ಬಂಟ್ವಾಳ : ತುಂಬೆ ರಾಮನಗರ ಶ್ರೀ ಜುಮಾದಿ ಬಂಟ ವೈದ್ಯನಾಥ ಅರಸು ಮಹಿಸಂದಾಯ ದೈವಗಳ ಸಾನ್ನಿಧ್ಯ ಜೀರ್ಣೋದ್ಧಾರ, ಪಂಜುರ್ಲಿ ದೈವದ ಪುನರ್ ಪ್ರತಿಷ್ಠೆ, ದೈವಗಳ ಸಾನ್ನಿಧ್ಯ ಸಂಬಂಧಿಸಿ ಶ್ರೀ ನಾಗದೇವರಿಗೆ ಬ್ರಹ್ಮಕಲಶೋತ್ಸವ ಸಮಾಲೋಚನಾ ಸಭೆ ನ. 6 ರಂದು ದೈವಸ್ಥಾನದ ಪ್ರಾಂಗಣದಲ್ಲಿ ಆಡಳಿತ ಸಮಿತಿ ಅಧ್ಯಕ್ಷ ಭುವನೇಶ್ ಶೆಟ್ಟಿ ಸಂಚಯಗಿರಿ ಅಧ್ಯಕ್ಷತೆಯಲ್ಲಿ ನಡೆಯಿತು.
2023 ಫೆ. 1 ,2 ,3 ರಂದು ಬ್ರಹ್ಮಕಲಶೋತ್ಸವಕ್ಕೆ ದಿನ ನಿಗದಿ ಪಡಿಸಲಾಯಿತು.
ಜೀರ್ಣೋದ್ದಾರ ಸಮಿತಿ ಗೌರವಾಧ್ಯಕ್ಷ ಉದಯ ಕುಮಾರ್ ರಾವ್ ದೀಪ ಬೆಳಗಿಸಿ ಸಮಾಲೋಚನಾ ಸಭೆಗೆ ಚಾಲನೆ ನೀಡಿದರು. ಅಧ್ಯಕ್ಷ ಸತೀಶ್ ಶೆಟ್ಟಿ ಬಂಟ್ವಾಳ, ಪ್ರಧಾನ ಕಾರ್ಯದರ್ಶಿ ತಿಮ್ಮಯ್ಯ ಶೆಟ್ಟಿ ಕಲ್ಲಕಟ್ಟ, ಕಾರ್ಯದರ್ಶಿಗಳಾದ ನಾಗೇಶ್ ಶೆಟ್ಟಿ ರಾಮನಗರ, ಬಿ.ದೇವದಾಸ ಶೆಟ್ಟಿ.
ಆಡಳಿತ ಸಮಿತಿ ಪ್ರಧಾನ ಕಾರ್ಯದರ್ಶಿ ಶ್ರೀಧರ ಪೂಜಾರಿ ಹೊಸಮನೆ, ಕಾರ್ಯದರ್ಶಿಗಳಾದ ಉಮೇಶ್ ಭಂಡಾರಿ ತುಂಬೆ, ಬಾಬು ಶೆಟ್ಟಿ ತುಂಬೆ, ವೆಂಕಪ್ಪ ಪೂಜಾರಿ ಬಂಟ್ವಾಳ, ಉಪಾಧ್ಯಕ್ಷ ಶ್ರೀನಿವಾಸ ಭಂಡಾರಿ, ಪ್ರಮುಖರಾದ ಮಹಾಬಲ ಸಪಲ್ಯ ಬಂಟ್ವಾಳ, ಸುರೇಶ್ ಭಂಡಾರಿ ತುಂಬೆ, ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here