ವೆಂಕಪ್ಪ ನಲಿಕೆಯವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ

0


ಬಂಟ್ವಾಳ : ತಾಲೂಕಿನ ದೇವಶ್ಯ ಪಡೂರು ಗ್ರಾಮದ ಕುಂಟಾಲಪಲ್ಕೆಯ ವೆಂಕಪ್ಪ ನಲ್ಕೆಯವರು ಒಬ್ಬ ಪ್ರಮಾಣಿಕ, ನಿಷ್ಕಲ್ಮಶ ‌‌ಹೃದಯವಂತ, ಪ್ರಸಿದ್ಧ ದೈವವರ್ತಕರು, ಜ್ಯೋತಿಷ್ಯರು, ನಾಟಿ ವೈದ್ಯರಾಗಿ ಪರಿಣಿತರಾಗಿದ್ದಾರೆ. ತನ್ನ 12ನೇ ವಯಸ್ಸಿನಲ್ಲಿ ದೈವನರ್ತನ ಸೇವೆಯನ್ನು ಮಾಡುತ್ತಾ ಕಳೆದ 38 ವರ್ಷಗಳಿಂದ ನೂರ್ತಾಡಿ ಗ್ರಾಮ ದೈವ ಅಡಿಮಾರಾಯ ದೈವದ ನರ್ತನ ಸೇವೆಯನ್ನು ಮಾಡುತಿದ್ದು ಬ್ರಹ್ಮರೊಟ್ಲು ಕನಪ್ಪಾಡಿ ತಾಯಿ ದೈವದ ನರ್ತನ ಸೇವೆಯನ್ನು ಕೂಡ ಇವರು ಮಾಡುತ್ತಿದ್ದಾರೆ. ವೆಂಕಪ್ಪ ನಲಿಕೆ ಇವರು ದೈವ ನರ್ತನದ ಲಯ, ಸ್ಪಷ್ಟ ನುಡಿಕಟ್ಟು, ತುಳುಭಾಷಾ ಪ್ರಾವಿಣ್ಯತೆ, ಕೌಶಲ್ಯತೆ, ಬಣ್ಣಗಾರಿಕೆ, ಸಂಧಿ ಪಾಡ್ದನಗಳ ಮೇರು ಅನುಭವವಿದೆ. ಕೃಷಿಕರಾಗಿದ್ದು, ಈ ಭಾಗದ ಜನರಿಗೆ ಆಪ್ತಬಾಂಧವನಾಗಿ ತಮ್ಮ ಕಷ್ಟಗಳಿಗೆ ನೇರವಾಗುವ ಮನೋಭಾವವನ್ನು ಹೊಂದಿರುವ ವೆಂಕಪ್ಪನವರಿಗೆ ಈ ಸಲದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಖಂಡಿತವಾಗಿಯೂ ಯಾವುದೇ ರಾಜಕಾರಣವಿಲ್ಲದ ಪ್ರಶಸ್ತಿ ಆಗಿದೆ ಎಂದು ಜನರ ಅಭಿಪ್ರಾಯವಾಗಿದೆ.

LEAVE A REPLY

Please enter your comment!
Please enter your name here