ಸಿಡಿಲು ಬಡಿದು ಮನೆಗೆ ಹಾನಿ,ವೃದ್ಧೆಗೆ ಗಾಯ

0

ಬಂಟ್ವಾಳ : ವಾಮದಪದವಿನ ಪಾಲೆದಮರ ಎಂಬಲ್ಲಿ ಅ.ಅ.15ರಂದು ರಾತ್ರಿ ಮನೆಗೆ ಸಿಡಿಲು ಬಡಿದ ಪರಿಣಾಮ ಮನೆಯಲ್ಲಿ ಮಲಗಿದ್ದ ವೃದ್ದೆಯೋರ್ವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.ಮನೆ ಸಂಪೂರ್ಣ ಹಾನಿಯಾಗಿದ್ದು, ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ.

ವಾಮದಪದವಿನ ಪಾಲೆದಮರ ಎಂಬಲ್ಲಿ ಸತೀಶ್ ಶೇರಿಗಾರ್ ಎಂಬವರ ಮನೆಗೆ ಸಿಡಿಲು ಬಡಿದಿದ್ದು, ಮನೆಯ ವಿದ್ಯುತ್ ವಯರ್ ಸಂಪೂರ್ಣ ಸುಟ್ಟು ಕರಟಿಹೋಗಿದ್ದಲ್ಲದೆ ಗೋಡೆ ಬಿರುಕು ಬಿಟ್ಟಿದ್ದು,  ಮನೆಗೂ ಹಾನಿಯಾಗಿದೆ .

ಸಿಡಿಲಿನ ಅಬ್ಬರಕ್ಕೆ ಮನೆಯಲ್ಲಿದ್ದ ಐವರಲ್ಲಿ ಸತೀಶ್ ಅವರ ತಾಯಿ  ಬೇಬಿ ಅವರಿಗೆ ಗಾಯವಾಗಿದ್ದು, ಬಂಟ್ಚಾಳ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ವೇಳೆ ಮಲಗಿದ್ದ ಸತೀಶ್ ರವರ ಅಕ್ಕ ಶೋಭಾ,ಸಹೋದರ ಕಿಶೋರ್ ,ಪತ್ನಿ ಜಲಜಾಕ್ಷಿ, ಸತೀಶ್ ಅವರ ಮಗು ಋಷಿಕಾ ಅವರು ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ.

LEAVE A REPLY

Please enter your comment!
Please enter your name here