ಬಂಟ್ವಾಳ ಯುವ ವೇದಿಕೆ ಕುಲಾಲ ಸಂಘದಿಂದ ‘ಮರಿಯಲದ ನೆಂಪು, ಕುಂಕುಮ ಬೆಸುಗೆ ಕುಟುಂಬ ಸಂಭ್ರಮ’

0

ಬಂಟ್ವಾಳ: ಕುಲಾಲ ಯುವ ವೇದಿಕೆ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಆಶ್ರಯದಲ್ಲಿ ಕುಲಾಲ ಸಮುದಾಯ ಭವನ ಪೊಸಲ್ಲಿಯಲ್ಲಿ ‘ಮರಿಯಲದ ನೆಂಪು ಕುಂಕುಮ ಬೆಸುಗೆ ಕುಟುಂಬ ಸಂಭ್ರಮ’ ದ ಸಭಾಕಾರ್ಯಕ್ರಮ ನಡೆಯಿತು. ಶಾರದಾ ವಿ ಬಂಗೇರರವರ ಪಾಡ್ದನ ಹಾಗೂ ಉದ್ಯಮಿ ಕೇಶವ ಬಾಳೆಹಿತ್ಲು ರವರು ತೆಂಬರೆ ಬಾರಿಸುವ ಮೂಲಕ ವಿಶಿಷ್ಟವಾಗಿ‌ ಕಾರ್ಯಕ್ರಮ ಉದ್ಘಾಟಿಸಲಾಯಿತು.

ಈ ಸಂದರ್ಭದಲ್ಲಿ ದೇವರಾಜು ಅರಸು ಪ್ರಶಸ್ತಿ ಪುರಸ್ಕೃತ ವೈದ್ಯ ಡಾ. ಅಣ್ಣಯ್ಯ ಕುಲಾಲ್, ಯುವ ವೇದಿಕೆ ರಾಜ್ಯಾಧ್ಯಕ್ಷ ಗಂಗಾಧರ ಬಂಜನ್,ತುಳು ಸಾಹಿತಿ ಕುಶಲಾಕ್ಷಿ ಕಣ್ವತೀರ್ಥ, ಮಂಗಳೂರು ರೇಡಿಯೋ ಸಾರಂಗ್ ನ ಬಿಂದು ಕುಲಾಲ್, ಪತ್ರಕರ್ತ ಸಂತೋಷ್ ನೆತ್ತರಕೆರೆ, ನ್ಯಾಯವಾದಿ ಸುರೇಶ್ ನಾವೂರು, ಕಲ್ಪವೃಕ್ಷ ಟ್ರೇಡರ್ಸ್ ಮಾಲಕ ಸುಂದರ ಮೂಲ್ಯ, ಹಿರಿಯ ನಾಗರಿಕ ಸಂಘದ ಅಧ್ಯಕ್ಷ ಟಿ.ಶೇಷಪ್ಪ ಮೂಲ್ಯ, ಕುಲಶೇಖರ ವೀರನಾರಾಯಣ ಸೇವಾಸಮಿತಿ ಅಧ್ಯಕ್ಷ ಸುಂದರ ಕುಲಾಲ್, ಕುಲಾಲ ಸುಧಾರಕ ಸಂಘದ ಅಧ್ಯಕ್ಷ ನಾರಾಯಣ ಸಿ ಪೆರ್ನೆ,ಬಂಟ್ವಾಳ ಯುವ ವೇದಿಕೆ ಅಧ್ಯಕ್ಷ ಸಂತೋಷ್ ಮರ್ತಾಜೆ ಉಪಸ್ಥಿತರಿದ್ದರು. ಪ್ರ.ಕಾರ್ಯದರ್ಶಿ ನಿತೀಶ್ ಕುಲಾಲ್ ಪಲ್ಲಿಕಂಡ ಸ್ವಾಗತಿಸಿ.ಸುಕುಮಾರ್ ಬಂಟ್ವಾಳ ವಂದಿಸಿದರು.H.K ನಯನಡು ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here