ನಾವೂರು: ಗಣೇಶೋತ್ಸವದ ಪ್ರಯುಕ್ತ ವಿವಿಧ ಆಟೋಟ ಸ್ಪರ್ಧೆ, ಸನ್ಮಾನ

0

ಬಂಟ್ವಾಳ : ಶ್ರೀ ವೀರಾಂಜನೇಯ ಯುವ ಫ್ರೆಂಡ್ಸ್ ನಾವೂರು ಶಾಲಾ ಬಳಿ 11ನೇ ವರ್ಷದ ಗಣೇಶೋತ್ಸವದ ಪ್ರಯುಕ್ತ ವಿವಿಧ ಆಟೋಟ ಸ್ಪರ್ಧೆಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಸನ್ಮಾನ ಕಾರ್ಯಕ್ರಮ ಸೆ. 5ರಂದು ಜರಗಿತು. ಪ್ರಗತಿಪರ ಕೃಷಿಕ ದಿನೇಶ್ ಪೂಜಾರಿ ಕೂರಿಬೈಲು, ನಿವೃತ್ತ ಸೇನಾನಿ ಜಯಪ್ರಕಾಶ್ ಸಂಜಕಬೆಟ್ಟು, ಹರೀಶ್ ಮೈಂದಾಳ ಇವರನ್ನು ಈ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಬಂಟ್ವಾಳ ಶಾಸಕ ರಾಜೇಶ್ ನಾಯಕ್ ಉಳಿಪ್ಪಾಡಿಗುತ್ತು, ಗ್ರಾ.ಪಂ. ಅ‌ಧ್ಯಕ್ಷ ಉಮೇಶ್ ಕುಲಾಲ್, ಯುವ ಮೋರ್ಚಾ ಜಿಲ್ಲಾ ಕಾರ್ಯದರ್ಶಿ ಸುದರ್ಶನ್ ಬಜ, ಮನ್ಮಥ್‌ರಾಜನ್ ಜೈನ್, ಪೆರಿಯರ್ ಗುತ್ತು, ಗ್ರಾ.ಪಂ.ಸದಸ್ಯರಾದ ತ್ರಿವೇಣಿ ಸುಂದರ್, ಸುವರ್ಣ ಕುಮಾರ್ ಜೈನ್, ಯೋಗೀಶ್, ಜನಾರ್ಧನ, ನಾವೂರೇಶ್ವರ ವಿಷ್ಣುಮೂರ್ತಿ ದೇವಸ್ಥಾನ ಅರ್ಚಕ ರಾಮಾಚಂದ್ರಭಟ್, ನಾವೂರು ಕಲ್ಪವೃಕ್ಷ ಟ್ರೇಡರ್ಸ್ ನ ಮಾಲಕ ಸುಂದರ್ ಕುಲಾಲ್, ಹಿಂದೂ ಜಾಗರಣ ವೇದಿಕೆ ಕರ್ನಾಟಕ ದಕ್ಷಿಣದ ಪ್ರಾಂತ ಸಂಯೋಜಕ ಕೇಶವ ಮೂರ್ತಿ, ನ್ಯಾಯವಾದಿ ಸುರೇಶ್ ಕುಮಾರ್, ಸುಜೀತ್ ಕುಮಾರ್ ಜೈನ್, ಹರಿಕೃಷ್ಣ ಪೊರ್ಕಳ, ಶಾಂತ ವೀರ ಪೂಜಾರಿ, ಹರಿಪ್ರಸಾದ್ ಬಳ್ಳುಳ್ಳಾಯ, ಕ್ಷೇತ್ರಿಯ ಸಂಘಟನಾ ಕಾರ್ಯದರ್ಶಿ ಜಗದೀಶ್ ಕಾರಂತ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here