ವಿವಿಧ ಶಾಲಾ, ಸಂಘ ಸಂಸ್ಥೆಯ ವತಿಯಿಂದ ಹಿ.ಪ್ರಾ.ಶಾಲೆ ಮಜಿ ವೀರಕಂಬ ಶಾಲೆಯಲ್ಲಿ ರಾಷ್ಟ್ರೀಯ ಸೇವಾ ಯೋಜನೆ

0

ವೀರಕಂಭ : ಸರಕಾರಿ ಶಾಲೆಗಳು ಕೇವಲ ಪುಸ್ತಕದ ವಿದ್ಯೆಯನ್ನಷ್ಟೇ ಕೊಡುವುದಲ್ಲ ಅದು ಬದುಕಿನ ಹಾದಿಯನ್ನೂ ತಿಳಿಸುತ್ತದೆ.ಮಾತೃಭಾಷಾ ಮಾಧ್ಯಮದಲ್ಲಿ ಕಲಿತ ಅದೆಷ್ಟೋ ಜನರು ಇಂದು ಉನ್ನತ ಸ್ಥಾನದಲ್ಲಿ ಇರುವ ಹಲವಾರು ಉದಾಹರಣೆಗಳಿವೆ ಆದ್ದರಿಂದ ಕಲಿಕೆಯು ಅಂಕಗಳಿಗೆ ಸೀಮಿತವಾಗಿರದೇ ಬದುಕಿಗೆ ಹತ್ತಿರವಾಗಿರಬೇಕು ಎಂದು ಮಜಿ ವೀರಕಂಭ ಶಾಲೆಯ ದತ್ತು ಸಮಿತಿಯ ಅಧ್ಯಕ್ಷರಾದ ಸುರತ್ಕಲ್ ಶ್ರೀಮಾತಾ ಡೆವಲಪರ್ಸ್ ನ ಮ್ಯಾನೇಜಿಂಗ್ ಡೈರೆಕ್ಟರ್ ಸಂತೋಷ್ ಕುಮಾರ್ ಶೆಟ್ಟಿ ಹೇಳಿದರು.

ಅವರು ಅ.22ರಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಮಜಿ ವೀರಕಂಬ ಇಲ್ಲಿ ಸ್ಕೂಲ್ ಬೆಲ್ ಕ್ಯಾಂಪಸ್ ಟು ಕಮ್ಯೂನಿಟಿ ಹಾಗೂ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕರ್ನಾಟಕ ಇದರ ಸಹಯೋಗದಲ್ಲಿ ಪ್ರಥಮ ದರ್ಜೆ ಕಾಲೇಜ್ ವಿಟ್ಲ ಇದರ ರಾಷ್ಟ್ರೀಯ ಸೇವಾ ಯೋಜನೆಯ ವಿದ್ಯಾರ್ಥಿಗಳ ಸಹಕಾರದೊಂದಿಗೆ ವಣ೯ ಚಿತ್ತಾರದೊಂದಿಗೆ ಶಾಲಾ ತರಗತಿಗಳ ಸೌಂದಯೀ೯ಕರಣ ಕಾಯ೯ಕ್ರಮವನ್ನು ಉಧ್ಘಾಟಿಸಿ ಮಾತನಾಡಿದರು.

ಕಲಿಕೆಯು ಪ್ರತಿಯೊಂದು ಹಂತದಲ್ಲಿಯೂ ನಡೆಯುತ್ತದೆ ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಂಡವರಿಗೆ ಯಾವುದೇ ವಿಷಯದಲ್ಲೂ ಸೋಲಾಗುವುದಿಲ್ಲ ಎಂದು ಈ ಕಾಯ೯ಕ್ರಮದಲ್ಲಿ ತಮ್ಮ ಕೈಚಳಕ ತೋರಿಸಲು ಭಾಗಿಯಾಗುವ ಪ್ರಥಮದಜೆ೯ ಕಾಲೇಜಿನ ಎನ್ ಎಸ್ ಎಸ್ ವಿಧ್ಯಾಥಿ೯ಗಳಿಗೆ ಕಾಲೇಜಿನ ಪ್ರಾಂಶುಪಾಲರಾದ ಶ್ರೀಜಾ ರವರು ಹುರಿದುಂಬಿಸಿದರು.

ಶಾಲೆಯು ಊರ ಕಲಶವಿದ್ದಂತೆ ಅದರ ಸೌಂದಯ೯ದ ಕೆಲಸಕ್ಕಾಗಿ ದುಡಿಯುವ ಸಹಕರಿಸುವ ಅದೆಷ್ಟೋ ಕೈಗಳು ಜೊತೆಗೆ ನಿಲ್ಲತ್ತವೆ ಅದರ ಅವಕಾಶವನ್ನು ಪಡೆದುಕೊಂಡಾಗ ಎಲ್ಲಾ ಕೆಲಸಗಳು ಅಚ್ಚುಕಟ್ಟಾಗಿ ನಡೆಯುತ್ತವೆ ಅದಕ್ಕಾಗಿ ಹಿರಿಯ ವಿಧ್ಯಾಥಿ೯ಗಳು ತಮ್ಮ ಸಹಾಯ ಮಾಡುತ್ತಿರುವುದು ಸಂತೋಷದ ವಿಚಾರವಾಗಿದೆ ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಸಂಜೀವ ಮೂಲ್ಯರವರು ತಿಳಿಸಿದರು.

ವೇದಿಕೆಯಲ್ಲಿ ಈ ಉತ್ತಮ ಕೆಲಸಕ್ಕೆ ಕಾರಣರಾದ ಅಖಿಲ ಭಾರತ ವಿಧ್ಯಾರ್ಥಿ ಪರಿಷತ್ ಇದರ ಜಿಲ್ಲಾ ಸಂಚಾಲಕ ದಿನೇಶ್ ಕೊಯಿಲ , ಮಜಿ ಶಾಲಾ ಹಿರಿಯ ವಿದ್ಯಾಥಿ೯ ಸಂಘದ ಅಧ್ಯಕ್ಷ ರಮೇಶ್ ಗೌಡ ಮೈರ, ಸ್ಕೂಲ್ ಬೆಲ್ ಸಂಘಟನೆಯ ಚಿತ್ರ ಕಲಾವಿದರಾದ ಅಚ೯ನ್, ವಿಟ್ಲ ಪ್ರಥಮ ದಜೆ೯ ಕಾಲೇಜಿನ ಉಪನ್ಯಾಸಕಿ ಜ್ಯೋತಿ, ಎನ್,ಎಸ್,ಎಸ್ ಘಟಕದ ಸಂಯೋಜಕಿ ಶ ಜ್ಯೋತಿ, ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಪ್ರಥಮ ದಜೆ೯ ಕಾಲೇಜು ವಿಟ್ಲ ದ ಎನ್.ಎಸ್.ಎಸ್. ವಿಧ್ಯಾರ್ಥಿಗಳು, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ವಿದ್ಯಾರ್ಥಿಗಳು, ಎಸ್.ಡಿ.ಎಂ.ಸಿ ಸದಸ್ಯರು, ಶಾಲಾ ಮಕ್ಕಳು, ಶಿಕ್ಷಕರು,ಹಾಜರಿದ್ದರು.
ಮುಖ್ಯ ಶಿಕ್ಷಕ ನಾರಾಯಣ ಪೂಜಾರಿ ಸ್ವಾಗತಿಸಿ, ಸಹ ಶಿಕ್ಷಕಿ ಅನುಷಾ ವಂದಿಸಿದರು. ಶಿಕ್ಷಕಿ ಸಂಗೀತ ಶಮ೯ರವರು ಕಾಯ೯ಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here